ADVERTISEMENT

ತಮಿಳುನಾಡು ಚುನಾವಣೆಗೆ ಚಿತ್ರದುರ್ಗದಿಂದ 475 ಸಿಬ್ಬಂದಿ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2021, 15:22 IST
Last Updated 2 ಏಪ್ರಿಲ್ 2021, 15:22 IST
ಚುನಾವಣಾ ಕರ್ತವ್ಯಕ್ಕಾಗಿ ಚಿತ್ರದುರ್ಗದಿಂದ ತಮಿಳುನಾಡು ರಾಜ್ಯದ ಕಡೆ ಶುಕ್ರವಾರ ಪ್ರಯಾಣ ಬೆಳೆಸಿದ ಜಿಲ್ಲೆಯ ಗೃಹರಕ್ಷಕದಳದ ಅಧಿಕಾರಿಗಳು ಮತ್ತು ಸಿಬ್ಬಂದಿ
ಚುನಾವಣಾ ಕರ್ತವ್ಯಕ್ಕಾಗಿ ಚಿತ್ರದುರ್ಗದಿಂದ ತಮಿಳುನಾಡು ರಾಜ್ಯದ ಕಡೆ ಶುಕ್ರವಾರ ಪ್ರಯಾಣ ಬೆಳೆಸಿದ ಜಿಲ್ಲೆಯ ಗೃಹರಕ್ಷಕದಳದ ಅಧಿಕಾರಿಗಳು ಮತ್ತು ಸಿಬ್ಬಂದಿ   

ಚಿತ್ರದುರ್ಗ: ತಮಿಳುನಾಡು ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆ ಬಂದೋಬಸ್ತ್‌ಗೆ ಜಿಲ್ಲೆಯ 475 ಗೃಹರಕ್ಷಕದಳದ ಅಧಿಕಾರಿಗಳು ಮತ್ತು ಸಿಬ್ಬಂದಿ ಅಲ್ಲಿನ ಸರ್ಕಾರಿ ಬಸ್‌ಗಳಲ್ಲೇ ಶುಕ್ರವಾರ ಚಿತ್ರದುರ್ಗದಿಂದ ತೆರಳಿದರು.

‘ಜಿಲ್ಲೆಯ ಗೃಹರಕ್ಷಕದಳದ ಸಿಬ್ಬಂದಿ ಈ ಹಿಂದೆಯೂ ಹಲವು ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಇದೇ ಕಾರಣಕ್ಕಾಗಿ ಚುನಾವಣಾ ಆಯೋಗ ಹಾಗೂ ತಮಿಳುನಾಡು ಗೃಹ ಇಲಾಖೆ ಆದೇಶದ ಮೇರೆಗೆ ಬಂದೋಬಸ್ತ್‌ಗೆ ಕಳುಹಿಸಲಾಗಿದೆ’ ಎಂದು ಜಿಲ್ಲಾ ಗೃಹರಕ್ಷಕದಳದ ಕಮಾಂಡೆಂಟ್ ಸಿ.ಕೆ. ಸಂಧ್ಯಾ ತಿಳಿಸಿದ್ದಾರೆ.

ಗೃಹರಕ್ಷಕದಳದ ತಿಪ್ಪೇಸ್ವಾಮಿ, ಸುಧಾ, ವಸಂತ್, ಶಿವಣ್ಣ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.