ADVERTISEMENT

ಅಂಚೆ ಇಲಾಖೆ ವಾಹನ ಕ್ಯಾಂಟರ್‌ಗೆ ಡಿಕ್ಕಿ: ಇಬ್ಬರು ಸಾವು

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 4:29 IST
Last Updated 17 ಜನವರಿ 2021, 4:29 IST
ಅಪಘಾತ–‍ಪ್ರಾತಿನಿಧಿಕ ಚಿತ್ರ
ಅಪಘಾತ–‍ಪ್ರಾತಿನಿಧಿಕ ಚಿತ್ರ   

ಹಿರಿಯೂರು (ಚಿತ್ರದುರ್ಗ): ತಾಲ್ಲೂಕಿನ ಮೇಟಿಕುರ್ಕಿ ಬಳಿಯ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಕು ಸಾಗಣೆ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

ಮೃತಪಟ್ಟವರನ್ನು ಕುಮಾರ್ (24), ವಿಜಯ್ (28) ಎಂದು ಗುರುತಿಸಲಾಗಿದೆ.

ಮೇಟಿಕುರ್ಕಿ ಬಳಿ ಹೆದ್ದಾರಿ ಬದಿಯಲ್ಲಿ ಶನಿವಾರ ತಡ ರಾತ್ರಿ ಕ್ಯಾಂಟರ್ ನಿಲುಗಡೆ ಮಾಡಿ ಚಾಲಕ ನಿದ್ದೆಗೆ ಜಾರಿದ್ದನು. ದಾವಣಗೆರೆಯಿಂದ ಬೆಂಗಳೂರಿಗೆ ಹೊರಟಿದ್ದ ಅಂಚೆ ಇಲಾಖೆ ವಾಹನ ಚಾಲಕನ ನಿಯಂತ್ರಣ ಕಳೆದುಕೊಂಡು ಕ್ಯಾಂಟರ್‌ಗೆ ಅಪ್ಪಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.