ಹೊಸದುರ್ಗ: ತಾಲ್ಲೂಕಿನ ಬಾಗೂರಿನ ಪಶ್ಚಿಮ ದಿಕ್ಕಿನಲ್ಲಿರುವ ನಾಯಕನಕೆರೆ 12 ವರ್ಷಗಳ ನಂತರ ಕೋಡಿ ಬಿದ್ದಿದೆ.
ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೆರೆ ಕೋಡಿ ಬಿದ್ದಿದ್ದು, ಜನರು ಸಂತಸಗೊಂಡಿದ್ದಾರೆ. ಕೆರೆ ಬಳಿ ನೂರಾರು ಜನ ಮೀನು ಹಿಡಿಯುತ್ತಿದ್ದಾರೆ. ಮತ್ತೊಂದೆಡೆ ಮಕ್ಕಳು ಮೀನು ನೋಡಲು ಕೆರೆಯತ್ತ ಧಾವಿಸುತ್ತಿದ್ದಾರೆ.
‘1902ರಲ್ಲಿ ನಿರ್ಮಿಸಿರುವ ಈ ಕೆರೆ 400-500 ಎಕರೆ ವಿಸ್ತೀರ್ಣ ಹೊಂದಿದೆ. ಸುತ್ತಲಿನ ಬಾಗೂರು, ಶ್ರೀರಂಗಾಪುರ ಹಳೇಕುಂದೂರು, ಹೊಸಕುಂದೂರು, ಪಾಳೇದಳ್ಳಿ, ಆನಿವಾಳ ಸೇರಿದಂತೆ ಸುತ್ತಲಿನ ಗ್ರಾಮಗಳ ಜಮೀನುಗಳಿಗೆ ನೀರುಣಿಸುತ್ತಿತ್ತು, ಆ ಜನರ ಒಡನಾಡಿಯಾಗಿದೆ. ಸುಮಾರು 6.5ರಿಂದ 7 ಅಡಿ ನೀರು ಬಂದಿದೆ ಕೋಡಿ ಬಿದ್ದಿದೆ. 2010ರಲ್ಲಿ ಕೋಡಿ ಬಿದ್ದಿದ್ದು, ಪುನಃ ಇವಾಗ ಕೋಡಿ ಬಿದ್ದಿರುವ ದೃಶ್ಯ ಕಣ್ತುಂಬಿಕೊಳ್ಳುವುದು ನಮ್ಮ ಭಾಗ್ಯ’ ಎಂದು ಶ್ರೀರಂಗಾಪುರದ ಖಾನಿ ಚಂದಣ್ಣ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.