ADVERTISEMENT

ಹೊಳಲ್ಕೆರೆ | ಹನಿ ನೀರಾವರಿ ಸಹಾಯಧನ ಹೆಚ್ಚಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2024, 15:50 IST
Last Updated 7 ಆಗಸ್ಟ್ 2024, 15:50 IST
ಹೊಳಲ್ಕೆರೆಯಲ್ಲಿ ರೈತಸಂಘದ ಸದಸ್ಯರು ಹನಿ ನೀರಾವರಿ ಸಹಾಯಧನವನ್ನು ಶೇ 90ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿ ತೋಟಗಾರಿಕೆ ಇಲಾಖೆಯ ಅಧಿಕಾರಿಗೆ ಮನವಿ ನೀಡಿದರು.
ಹೊಳಲ್ಕೆರೆಯಲ್ಲಿ ರೈತಸಂಘದ ಸದಸ್ಯರು ಹನಿ ನೀರಾವರಿ ಸಹಾಯಧನವನ್ನು ಶೇ 90ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿ ತೋಟಗಾರಿಕೆ ಇಲಾಖೆಯ ಅಧಿಕಾರಿಗೆ ಮನವಿ ನೀಡಿದರು.   

ಹೊಳಲ್ಕೆರೆ: ಹನಿ ನೀರಾವರಿ ಸಹಾಯಧನವನ್ನು ಶೇ 90ಕ್ಕೆ ಹೆಚ್ಚಿಸಬೇಕು ಎಂದು ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆಯ ಸದಸ್ಯರು ತೋಟಗಾರಿಕೆ ಇಲಾಖೆಯ ಅಧಿಕಾರಿ ಮಧು ಅವರಿಗೆ ಮನವಿ ಸಲ್ಲಿಸಿದರು.

ಹನಿ ನೀರಾವರಿ ಸೌಲಭ್ಯ ಪಡೆಯುವ ರೈತರಿಗೆ ಇದುವರೆಗೆ ಶೇ 75 ಸಹಾಯಧನ ನೀಡಲಾಗುತ್ತಿತ್ತು. ಆದರೆ, ರಾಜ್ಯ ಸರ್ಕಾರವು 5 ಗ್ಯಾರಂಟಿಗಳಿಗೆ ಹಣ ಹೊಂದಿಸುವ ಉದ್ದೇಶದಿಂದ ಹನಿ ನೀರಾವರಿ ಸಹಾಯಧನವನ್ನು ಶೇ 55ಕ್ಕೆ ಇಳಿಸಿದೆ. ಇದರಿಂದ ರೈತರಿಗೆ ಅನ್ಯಾಯ ಆಗಿದ್ದು, ತೋಟಗಳಿಗೆ ಹನಿ ನೀರಾವರಿ ಸೌಲಭ್ಯ ಪಡೆಯಲು ಆಗುತ್ತಿಲ್ಲ. ಹನಿ ನೀರಾವರಿ ಪದ್ಧತಿ ಅಳವಡಿಸುವ ಲ್ಯಾಟ್ರಲ್, ಪೈಪ್ ಸೇರಿದಂತೆ ಎಲ್ಲಾ ಪರಿಕರಗಳ ದರ ಹೆಚ್ಚಾಗಿದೆ. ಕೂಲಿಯ ದರವೂ ಹೆಚ್ಚಾಗಿದ್ದು, ರೈತರು ಲಕ್ಷಾಂತರ ರೂ ಖರ್ಚು ಮಾಡಿದರೂ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಳ್ಳಲು ಆಗುತ್ತಿಲ್ಲ ಎಂದು ರೈತರು ದೂರಿದರು.

ಸರ್ಕಾರ ನಮ್ಮ ತಾಲ್ಲೂಕಿನಲ್ಲಿ ಕೆಲವು ಬೆಳೆಗಳಿಗೆ ಮಾತ್ರ ಹನಿ ನೀರಾವರಿಗೆ ಸಹಾಯಧನ ನೀಡುತ್ತಿದೆ. ಅಡಿಕೆ ನಮ್ಮ ತಾಲ್ಲೂಕಿನ ಪ್ರಮುಖ ಬೆಳೆಯಾಗಿದ್ದರೂ, ಸಹಾಯಧನ ನೀಡುತ್ತಿಲ್ಲ. ಪಕ್ಕದ ಚನ್ನಗಿರಿ ತಾಲ್ಲೂಕಿನಲ್ಲಿ ಅಡಿಕೆಗೆ ಹನಿ ನೀರಾವರಿ ಸಹಾಯಧನ ನೀಡುತ್ತಿದ್ದು, ನಮ್ಮ ತಾಲ್ಲೂಕಿನ ರೈತರು ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ನಮ್ಮ ರೈತರಿಗೂ ಈ ಸೌಲಭ್ಯ ವಿಸ್ತರಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ರೈತಸಂಘದ ಪಟ್ಟಣ ಶಾಖೆಯ ಅಧ್ಯಕ್ಷ ಸಿದ್ದರಾಮಪ್ಪ, ಪ್ರಧಾನ ಕಾರ್ಯದರ್ಶಿ ಕೆ.ಎನ್.ಅಜಯ್, ಅಣ್ಣಪ್ಪ, ಶಿವಮೂರ್ತಿ, ಶ್ರೀಧರ್, ಪ್ರಭು, ಮಲ್ಲಿಕಾರ್ಜುನ್, ರಾಜೇಶ್, ಹಾಲೇಶ್, ವೃಷಭೇಂದ್ರಪ್ಪ, ಸಂಜೀವಪ್ಪ, ದುಕ್ಕಡ್ಲೆ ರವಿ, ದೇವೇಂದ್ರಪ್ಪ, ಕೆರೆಗುಂಡಿ ನಾಗರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.