ADVERTISEMENT

ಚಿತ್ರದುರ್ಗ: ಅವಿಶ್ವಾಸಕ್ಕೆ ಗೆಲುವು -ಅಧ್ಯಕ್ಷೆ ಪದಚ್ಯುತಿ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2019, 8:41 IST
Last Updated 7 ಫೆಬ್ರುವರಿ 2019, 8:41 IST

ಚಿತ್ರದುರ್ಗ: ಅವಿಶ್ವಾಸ ಗೊತ್ತುವಳಿ ಮಂಡನೆಯನ್ನು 25 ಸದಸ್ಯರು ಬೆಂಬಲಿಸಿದ್ದರಿಂದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅವರು ಗುರುವಾರ ಅಧಿಕಾರ ಕಳೆದುಕೊಂಡರು.

ಉಪಾಧ್ಯಕ್ಷೆ ಸುಶೀಲಮ್ಮ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಕರೆದಿದ್ದ ವಿಶೇಷ ಸಭೆಗೆ 37 ಸದಸ್ಯರ ಪೈಕಿ 27 ಜನ ಹಾಜರಾಗಿದ್ದರು. ಇದರಲ್ಲಿ ಅವಿಶ್ವಾಸದ ವಿರುದ್ಧ ಕೇವಲ ಎರಡು ಮತ ಚಲಾವಣೆ ಆದವು.

ಅಧ್ಯಕ್ಷರ ಪದಚ್ಯುತಿಗೆ ಪಕ್ಷಭೇದ ಮರೆತು ಒಂದಾಗಿರುವ ಜಿಲ್ಲಾ ಪಂಚಾಯಿತಿ ಸದಸ್ಯರು ಅವಿಶ್ವಾಸ ನಿರ್ಣಯ ಮಂಡನೆಗೆ ಒಂದೂವರೆ ತಿಂಗಳಿಂದ ಅವಕಾಶ ಕೋರಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.