ADVERTISEMENT

ಚಿತ್ರದುರ್ಗ: 3 ಲಕ್ಷ ಜನರಿಗೆ ಸಿಪಿಆರ್ ತರಬೇತಿ ಗುರಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2021, 4:48 IST
Last Updated 24 ಸೆಪ್ಟೆಂಬರ್ 2021, 4:48 IST

ಚಿತ್ರದುರ್ಗ: ‘ಹೃದಯ ಮತ್ತು ಶ್ವಾಸಕೋಶ ಕಾಯಿಲೆ ಸಂಬಂಧ (ಸಿಪಿಆರ್) ತರಬೇತಿಯನ್ನು ಒಟ್ಟು 3 ಲಕ್ಷ ಜನರಿಗೆ ಕೊಡುವ ಉದ್ದೇಶವಿದೆ’ ಎಂದು ಶರಣ ಸಂಸ್ಕೃತಿ ಉತ್ಸವ ಸಮಿತಿ ಕಾರ್ಯಾಧ್ಯಕ್ಷ ಕೆ.ಎಸ್. ನವೀನ್ ತಿಳಿಸಿದರು.

‘ಉತ್ಸವದ ಅಂಗವಾಗಿ ದೇಶದ ವಿಪತ್ತು ಬೆಂಬಲ ಕಾರ್ಯಪಡೆ, ಕೋವಿಡ್ ಇಂಡಿಯಾ ಅಭಿಯಾನ, ಹಾರ್ಟ್ ಅಂಡ್ ಸ್ಟ್ರೋಕ್ ಫೌಂಡೇಷನ್ ಆಫ್ ಇಂಡಿಯಾದ ವತಿಯಿಂದ ಅ. 4ರಿಂದ ಆರಂಭವಾಗುವ ತರಬೇತಿ 14ರವರೆಗೂ ನಡೆಯಲಿದೆ. ಈ ಮೂಲಕ ವಿಶ್ವ ದಾಖಲೆಯ ಗುರಿ ಹೊಂದಲಾಗಿದೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT