ಹೊಸದುರ್ಗ: ಪಟ್ಟಣದ ವಿಜಯ ಬ್ಯಾಂಕ್ ಎದುರೇ ಬುಧವಾರ ಕಾರಿನಲ್ಲಿದ್ದ ₹ 10 ಲಕ್ಷವನ್ನು ಕಳ್ಳರು ಎಗರಿಸಿದ್ದಾರೆ.
ತಾಲ್ಲೂಕಿನ ಲಕ್ಕಿಹಳ್ಳಿ ಗ್ರಾಮದ ನಿವಾಸಿ ಮುದ್ದಪ್ಪ ಅವರು ತಮ್ಮ ಮಾವ ರುದ್ರಪ್ಪ ಅವರ ಜಮೀನಿಗೆ ಬಂದಿದ್ದ ₹ 19.97 ಲಕ್ಷದಲ್ಲಿ ₹ 10 ಲಕ್ಷವನ್ನು ಕರ್ನಾಟಕ ಬ್ಯಾಂಕಿನಿಂದ ಬಿಡಿಸಿಕೊಂಡು ಕಾರಿನಲ್ಲಿ ಇಟ್ಟು ಕಾರು ಲಾಕ್ ಮಾಡಿಕೊಂಡು ವಿಜಯ ಬ್ಯಾಂಕ್ ಒಳಗಡೆ ಹೋಗಿದ್ದರು. 15 ನಿಮಿಷದ ಬಳಿಕ ಬಂದು ನೋಡಿದಾಗ ಯಾರೋ ಕಳ್ಳರು ಕಾರಿನ ಗಾಜನ್ನು ಒಡೆದು ಅದರಲ್ಲಿದ್ದ ₹ 10 ಲಕ್ಷವನ್ನು ಬ್ಯಾಗ್ ಸಮೇತ ಕದ್ದಿರುವುದು ಗೊತ್ತಾಗಿದೆ.
ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.