ಹೊಳಲ್ಕೆರೆ: ತೋಟದಲ್ಲಿನ ಕೊಳವೆಬಾವಿ ಮೋಟಾರ್ ಸ್ಟಾರ್ಟ್ ಮಾಡುವಾಗ ವಿದ್ಯುತ್ ಸ್ಪರ್ಶಿಸಿ ತಾಲ್ಲೂಕಿನ ಬಿ.ಜಿ. ಹಳ್ಳಿಯ ರೈತ ಸಂಜು ಅಲಿಯಾಸ್ ಪೇಪರ್ ತಿಪ್ಪೇಶ್ (33) ಶನಿವಾರ ಸಾವನ್ನಪ್ಪಿದ್ದಾರೆ.
ಶನಿವಾರ ಬೆಳಿಗ್ಗೆ ತೋಟಕ್ಕೆ ಹೋಗಿದ್ದ ಸಂಜು ಮನೆಗೆ ವಾಪಸ್ ಬಂದಿರಲಿಲ್ಲ. ಸಂಜು ಅವರು ಕೊಳವೆ ಬಾವಿ ಸ್ಟಾರ್ಟರ್ ಬಾಕ್ಸ್ ಹತ್ತಿರ ಬಿದ್ದಿರುವುದನ್ನು ಪಕ್ಕದ ತೋಟದ ರೈತರೊಬ್ಬರು ನೋಡಿ ಮನೆಯವರಿಗೆ ವಿಷಯ ತಿಳಿಸಿದ್ದರು. ತಕ್ಷಣವೇ ತೋಟಕ್ಕೆ ಬಂದ ಸಂಜು ಸಹೋದರ ಶಿವರಾಜ್ ಕಾರಿನಲ್ಲಿ ಸಂಜು ಅವರನ್ನು ಜಿಲ್ಲಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ವೈದ್ಯರು ಪರೀಕ್ಷಿಸಿ ನೋಡಿ ಸಂಜು ಸಾವನ್ನಪ್ಪಿರುವುದಾಗಿ ತಿಳಿಸಿದರು.
ಸಂಜು ಅವರಿಗೆ ಮೂರು ವರ್ಷಗಳ ಹಿಂದೆ ಮದುವೆಯಾಗಿತ್ತು. ಪುತ್ರಿ ಇದ್ದಾಳೆ. ಪತ್ನಿ ಮೂರು ದಿನಗಳ ಹಿಂದೆ ತವರು ಮನೆಗೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.