ADVERTISEMENT

ಹಿರಿಯೂರಿನಲ್ಲಿ ಚಿರತೆ ದಾಳಿ: 12 ಕುರಿ ಸಾವು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2021, 15:59 IST
Last Updated 14 ಅಕ್ಟೋಬರ್ 2021, 15:59 IST
   

ಹಿರಿಯೂರು (ಚಿತ್ರದುರ್ಗ): ತಾಲ್ಲೂಕಿನ ಸೀಗೆಹಟ್ಟಿ ಸಮೀಪದ ಉತ್ತರಗುಡ್ಡದಲ್ಲಿ ಮಂಗಳವಾರ ಕುರಿ ಹಿಂಡಿನ ಮೇಲೆ ಚಿರತೆಯೊಂದು ದಾಳಿ ಮಾಡಿದ ಪರಿಣಾಮ 12 ಕುರಿಗಳು ಮೃತಪಟ್ಟಿವೆ.

ಜಯಪ್ಪ ಎಂಬುವವರಿಗೆ ಸೇರಿದ ಕುರಿಗಳು ಮೇಯಲು ಹೋಗಿದ್ದಾಗ ಚಿರತೆ ದಾಳಿ ಮಾಡಿದೆ. ಒಂದು ಕುರಿಯನ್ನು ಚಿರತೆ ಹೊತ್ತೊಯ್ದಿದೆ. ವಲಯ ಅರಣ್ಯಾಧಿಕಾರಿ ಹರ್ಷ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಸ್ಥಳದಲ್ಲಿ ಚಿರತೆಯ ಹೆಜ್ಜೆಗುರುತು ಪತ್ತೆಯಾಗಿದೆ. ಮಳೆಯ ಕಾರಣಕ್ಕೆ ಕುರಿಗಳು ಹಿಂಡಾಗಿ ಒಂದೇ ಕಡೆ ನಿಂತಿದ್ದಾಗ ಚಿರತೆ ದಾಳಿ ಮಾಡಿದ್ದು, ಸಿಕ್ಕಸಿಕ್ಕ ಕುರಿಗಳ ಕುತ್ತಿಗೆಯ ಭಾಗವನ್ನು ಕಚ್ಚಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.