ADVERTISEMENT

ಟಾಟಾಕೂಟಿ ಪರ್ವತ ಏರಿದ ಕನ್ನಡಿಗ ಧನರಾಜ್

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 18:32 IST
Last Updated 17 ಅಕ್ಟೋಬರ್ 2021, 18:32 IST
ಧನರಾಜ್
ಧನರಾಜ್   

ಚಿತ್ರದುರ್ಗ: ಜಮ್ಮು ಮತ್ತು ಕಾಶ್ಮೀರದ ಪೆಹಲ್ಗಾಂನ 15,568 ಅಡಿ ಎತ್ತರದ ಟಾಟಾಕೂಟಿ ಪರ್ವತವನ್ನು ತಾಲ್ಲೂಕಿನ ಅನ್ನೆಹಾಳ್ ಗ್ರಾಮ ಭೋವಿ ಕಾಲೊನಿಯ ಧನರಾಜ್ ಯಶಸ್ವಿಯಾಗಿ ಏರಿದ್ದಾರೆ. ಪರ್ವತಾರೋಹಣ ಮುಗಿಸಿ ಗ್ರಾಮಕ್ಕೆ ಮರಳಿದ್ದಾರೆ.

ಯುವ ಸಬಲೀಕರಣ ಕ್ರೀಡಾ ಇಲಾಖೆ, ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯು ಈಚೆಗೆ ಪರ್ವತಾರೋಹಣ ಸಾಹಸ ಕಾರ್ಯಕ್ಕೆ 38 ಜನರನ್ನು ಆಯ್ಕೆ ಮಾಡಿತ್ತು. ಅದರಲ್ಲಿ ಧನರಾಜ್‌ ಕೂಡ ಒಬ್ಬರು. ಜಮ್ಮು ಮತ್ತು ಕಾಶ್ಮೀರದ ಜವಾಹರ್ ಇನ್‌ಸ್ಟಿಟ್ಯೂಟ್ ಆಫ್‌ ಮೌಂಟೆನೆರಿಂಗ್ ಅಂಡ್ ವಿಂಟರ್ ಸ್ಪೋರ್ಟ್ಸ್‌ನಲ್ಲಿ 10 ದಿನ ತರಬೇತಿ ಪಡೆದಿದ್ದರು.

ಯುವ ಸಾಹಸಿ 23 ಗಂಟೆಯೊಳಗೆ ಪರ್ವತ ಹತ್ತಿದ್ದಾರೆ. ಇದಕ್ಕೂ ಮುನ್ನ 2019ರಲ್ಲಿ ಜಮ್ಮು ಮತ್ತು ಕಾಶ್ಮೀರದ ಸೋನಾ ಮಾರ್ಗ್ ಪರ್ವತ ಏರುವುದಕ್ಕೆ ಕೂಡ ಧನರಾಜ್ ಆಯ್ಕೆಯಾಗಿದ್ದರು. ಆಗ 13,500 ಅಡಿ ಶಿಖರ ಏರಿದ್ದರು. ಸೈನ್ಯಕ್ಕೆ ಸೇರುವ ಗುರಿ
ಇಟ್ಟುಕೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.