ADVERTISEMENT

ಕವಿಗೋಷ್ಠಿಯಲ್ಲಿ ಅಲ್ಲಮಪ್ರಭು ಸ್ಮರಣೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2019, 14:37 IST
Last Updated 7 ಏಪ್ರಿಲ್ 2019, 14:37 IST
ಚಿತ್ರದುರ್ಗದಲ್ಲಿ ಶುಕ್ರವಾರ ಅಲ್ಲಮಪ್ರಭು ಸ್ಮರಣೆ, ಭಾರತೀಯ ನೂತನ ವರ್ಷಾರಂಭ ಹಾಗೂ ಯುಗಾದಿ ಅಂಗವಾಗಿ ನಡೆದ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಶಿವಮೂರ್ತಿ ಮುರುಘಾ ಶರಣರು ಮಾತನಾಡಿದರು.
ಚಿತ್ರದುರ್ಗದಲ್ಲಿ ಶುಕ್ರವಾರ ಅಲ್ಲಮಪ್ರಭು ಸ್ಮರಣೆ, ಭಾರತೀಯ ನೂತನ ವರ್ಷಾರಂಭ ಹಾಗೂ ಯುಗಾದಿ ಅಂಗವಾಗಿ ನಡೆದ ರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಶಿವಮೂರ್ತಿ ಮುರುಘಾ ಶರಣರು ಮಾತನಾಡಿದರು.   

ಚಿತ್ರದುರ್ಗ: ನಗರದ ಮುರುಘಾಮಠದಲ್ಲಿ ಶೂನ್ಯಪೀಠದ ಪ್ರಥಮಾಧ್ಯಕ್ಷ ಅಲ್ಲಮಪ್ರಭುದೇವರ ಸ್ಮರಣೆ ಮತ್ತು ಭಾರತೀಯ ನೂತನ ವರ್ಷಾರಂಭ ಯುಗಾದಿ ಅಂಗವಾಗಿ ರಾಜ್ಯ ಮಟ್ಟದ ಕವಿಗೋಷ್ಠಿ ಈಚೆಗೆ ನಡೆಯಿತು.

ಶಿವಮೂರ್ತಿ ಮುರುಘಾ ಶರಣರು, ‘ಅಲ್ಲಮನ ಬದುಕನ್ನು ಶಿವಯೋಗ ಸಾಧಕ, ಕವಿ (ಚಿಂತಕ) ಮತ್ತು ವಿಮರ್ಶಕ ಎಂದು ಮೂರು ಹಂತದಲ್ಲಿ ಗುರುತಿಸಬಹುದು. ಶಿವಯೋಗ ಸಾಧನೆ ಅಲ್ಲಮನ ಆಪ್ತವಾದ ಅಭ್ಯಾಸವಾಗಿತ್ತು' ಎಂದರು.

'ಅಲ್ಲಮನ ಒಳಗೆ ಒಬ್ಬ ಅನ್ವೇಷಕ ಇದ್ದ. ಸಮಾಜವನ್ನು ಸರಿದಾರಿಗೆ ತರಬೇಕು ಎಂಬ ಪ್ರಯತ್ನ ಮಾಡಿದರು' ಎಂದು ತಿಳಿಸಿದರು.

ADVERTISEMENT

ತುಮಕೂರಿನ ಕವಿ ಪ್ರೊ.ಕೆ.ಬಿ.ಸಿದ್ದಯ್ಯ, ‘ಅಲ್ಲಮನ ಸ್ಮರಣೆ ಎಂದರೆ ಕನ್ನಡದ ಮಣ್ಣನ್ನು ಬಹುಬಗೆಯಾಗಿ ಕಾಣುವುದು. ಸಹಜವಾದುದನ್ನು ಅಲ್ಲಮ ನುಡಿಯುತ್ತಾರೆ. ಅವರ ಸ್ಮರಣೆ ನಮ್ಮ ಪ್ರಜ್ಞೆಯನ್ನು ಜಾಗೃತಗೊಳಿಸುತ್ತದೆ' ಎಂದರು.

'ನಾಗಾರ್ಜುನನ ತರ್ಕ ಮತ್ತು ಬುದ್ಧನಿಂದಅಲ್ಲಮ ಪ್ರಭಾವಿತರಾಗಿದ್ದರು. ಅವರ ಜ್ಞಾನದ ಅನ್ವೇಷಣೆ ವಿಜ್ಞಾನವನ್ನು ಮೀರಿದ್ದು, ಅಲ್ಲಮಪ್ರಭು ನೇರ ನಡೆ– ನುಡಿಯಲ್ಲಿ ಕಟ್ಟಿದ ಚಿಂತನೆ ಅಪಾರವಾದುದು' ಎಂದರು.

ನಾಡಿನ ವಿವಿಧ ಭಾಗಗಳಿಂದ ಕವಿಗೋಷ್ಠಿಗೆ ಆಗಮಿಸಿದ್ದ ಕವಿಗಳು ಕವನಗಳನ್ನು ವಾಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.