ಮೊಳಕಾಲ್ಮುರು:ತಳಕುಹೋಬಳಿ ಗೌರಸಮುದ್ರ ಮಾರಮ್ಮದೇವಿ ಮರಿ ಪರಿಷೆಯು ಸೆಪ್ಟೆಂಬರ್ 27ರಂದು ನಡೆಯಲಿದೆ.
ದೊಡ್ಡ ಜಾತ್ರೆ ಆಗಸ್ಟ್ 30ರಂದು ನಡೆದಿತ್ತು. ದೊಡ್ಡಜಾತ್ರೆ ನಡೆದ 5ನೇ ಮಂಗಳವಾರ ಮರಿ ಪರಿಷೆ ನಡೆಯುವುದು ವಾಡಿಕೆ. ಮರಿ ಪರಿಷೆಯಲ್ಲಿ ದೇವಿಯ ಉತ್ಸವ ಮೂರ್ತಿಯನ್ನು ತರುವುದಿಲ್ಲ. ಬದಲಾಗಿ ದೇವಿಯಆಭರಣ, ವಸ್ತ್ರಗಳನ್ನು ತಂದು ಕಟ್ಟೆ ಮೇಲೆ ಪ್ರತಿಷ್ಠಾಪಿಸಲಾಗುವುದು ಎಂದು ದೇವಸ್ಥಾನ ಸಮಿತಿ ತಿಳಿಸಿದೆ.
ನೆರೆಯ ಸೀಮಾಂಧ್ರ ಸೇರಿದಂತೆ ಹಲವೆಡೆ ಭಕ್ತರು ಭಾಗವಹಿಸಲಿದ್ದು, ಸಿದ್ಧತೆ ಕೈಗೊಳ್ಳಲಾಗಿದೆ. ತಂಬಲು ಪ್ರದೇಶದಲ್ಲಿ ಪ್ರಾಣಿಬಲಿ ನಿಷೇಧಿಸಿದ್ದು, ತಪಾಸಣೆಗೆ ಚೆಕ್ಪೋಸ್ಟ್ ಸ್ಥಾಪಿಸಲಾಗಿದೆ ಎಂದು ತಹಶೀಲ್ದಾರ್ ರಘುಮೂರ್ತಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.