ಹಿರಿಯೂರು: ನಗರದ ತೇರುಬೀದಿಯಲ್ಲಿರುವ ಖಾದ್ರಿ ಲಕ್ಷ್ಮಿನರಸಿಂಹ ಸ್ವಾಮಿ ದೇವಾಲಯದಲ್ಲಿ ಆ. 10ರಂದು ನೂತನ ರಜತ ಕವಚ ಧಾರಣಾ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಮುಂಜಾನೆ 3 ಗಂಟೆಯಿಂದ ಗಣಪತಿ ಪೂಜೆ, ನವಗ್ರಹ ಕಳಶ ಸ್ಥಾಪನೆ, ಗಣ ಹೋಮ, ನವಗ್ರಹ ಹೋಮ, ಅಷ್ಟೋತ್ತರ, ಅಭಿಷೇಕ, ಮೂಲಮಂತ್ರ ಅಷ್ಟೋತ್ತರ ಹೋಮ, ಪೂರ್ಣಾಹುತಿ ಪೂಜೆ, ಮಧ್ಯಾಹ್ನ 12 ಗಂಟೆಯಿಂದ ಅನ್ನ ದಾಸೋಹ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಪೂಜಾ ಕಾರ್ಯಕ್ರಮದ ಸಂಯೋಜಕರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.