ಮೊಳಕಾಲ್ಮುರು: ತಾಲ್ಲೂಕಿನ ರಾಂಪುರ ಸಮುದಾಯ ಆರೋಗ್ಯ ಕೇಂದ್ರದ ಮಕ್ಕಳ ತಜ್ಞ ಡಾ.ಜಿ.ಬಿ. ಸುದರ್ಶನ್ ಅವರನ್ನು ವರ್ಗಾವಣೆ ಮಾಡಿರುವುದನ್ನು ಖಂಡಿಸಿ ಶನಿವಾರ ಆಸ್ಪತ್ರೆ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ರಾಂಪುರ ಆಸ್ಪತ್ರೆಯು 45-50 ಗ್ರಾಮಗಳಿಗೆ ಕೇಂದ್ರವಾಗಿದೆ. ಇಲ್ಲಿಗೆ ನಿತ್ಯ 200ಕ್ಕೂ ಹೆಚ್ಚು ರೋಗಿಗಳು ಬರುತ್ತಾರೆ. ಇಲ್ಲಿಯ ತನಕ ಮಕ್ಕಳ ತಜ್ಞರು ಇಲ್ಲದ ಕಾರಣ ಬಳ್ಳಾರಿಗೆ ಚಿಕಿತ್ಸೆಗೆ ಹೋಗಬೇಕಿತ್ತು. ಡಾ. ಸುದರ್ಶನ್ ಬಂದ ನಂತರ ಇದು ತಪ್ಪಿದ್ದು, ಈಗ ಏಕಾಏಕಿ ವರ್ಗಾವಣೆ ಮಾಡಿರುವುದು ಸರಿಯಲ್ಲ ಎಂದು ದೂರಿದರು.
ಕೂಡಲೇ ವರ್ಗಾವಣೆ ರದ್ದುಪಡಿಸಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕಾಂಗ್ರೆಸ್ ಪಕ್ಷದ ಹೋಬಳಿ ಘಟಕ ನೇತೃತ್ವ ವಹಿಸಿತ್ತು. ತಿಪ್ಪೇಶ್, ಆರ್. ರಮೇಶ್, ಗಂಗಾಧರ್, ಡಿ.ಬಿ. ಬಸವರಾಜ್, ರಾಮಕೃಷ್ಣ, ಹೊನ್ನೂರಸ್ವಾಮಿ, ಗಂಗರೆಡ್ಡಿ, ಹುಲುಗಪ್ಪ ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.