ADVERTISEMENT

ಬೆಸ್ಕಾಂ ಕಚೇರಿ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2025, 7:51 IST
Last Updated 9 ಸೆಪ್ಟೆಂಬರ್ 2025, 7:51 IST
ಬೆಸ್ಕಾಂ ಲೋಗೊ
ಬೆಸ್ಕಾಂ ಲೋಗೊ   

ಮೊಳಕಾಲ್ಮುರು: ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೋಮವಾರ ರಾಜ್ಯ ರೈತಸಂಘ ಮತ್ತು ಹಸಿರುಸೇನೆ ತಾಲ್ಲೂಕು ಘಟಕದಿಂದ ತಾಲ್ಲೂಕಿನ ಬಿ.ಜಿ.ಕೆರೆಯ ಬೆಸ್ಕಾಂ ಉಪ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. 

ತೋಟದ ಮನೆಗಳಿಗೆ ಆರ್‌ಆರ್‌ ಸಂಖ್ಯೆ ಇದ್ದರೂ ಸಿಂಗಲ್‌ಫೇಸ್‌ ವಿದ್ಯುತ್‌ ನೀಡುತ್ತಿಲ್ಲ. ಇದರಿಂದ ತೋಟದಲ್ಲಿ ವಾಸ ಮಾಡುವ ರೈತರಿಗೆ ತೀವ್ರ ತೊಂದರೆಯಾಗಿದೆ. ಕೂಡಲೇ ಈ ಬಗ್ಗೆ ಗಮನಹರಿಸಿ ಸಿಂಗಲ್‌ ಫೇಸ್‌ ವಿದ್ಯುತ್‌ ನೀಡಬೇಕು. ರಾತ್ರಿ ಕತ್ತಲಿನಲ್ಲಿ ವಿಷಜಂತುಗಳ ಜತೆ ಜೀವನ ಮಾಡುವ ಅನಿವಾರ್ಯ ಎದುರಾಗಿದೆ. ಮನೆಗಳಿಗೆ ಡಿಜಿಟಲ್‌ ಮೀಟರ್‌ ಅಳವಡಿಕೆ ಪ್ರಸ್ತಾವ ಕೈಬಿಡಬೇಕು ಎಂದು ಆಗ್ರಹಿಸಿದರು. 

ಅಕ್ರಮ- ಸಕ್ರಮ ಯೋಜನೆಯನ್ನು ಮರು ಜಾರಿ ಮಾಡಬೇಕು. ಟಿ.ಸಿ. ಸುಟ್ಟ 48 ಗಂಟೆಗಳ ಒಳಗಾಗಿ ಹೊಸ ವಿದ್ಯುತ್‌ ಪರಿವರ್ತಕ ನೀಡಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು. 

ADVERTISEMENT

ಸಂಘದ ರಾಜ್ಯ ಉಪಾಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ, ಜಿಲ್ಲಾ ಘಟಕದ ಅಧ್ಯಕ್ಷ ಮರ್ಲಹಳ್ಳಿ ರವಿಕುಮಾರ್‌, ಸೂರಮ್ಮನಹಳ್ಳಿ ರಾಜಣ್ಣ, ಹೇಮಣ್ಣ, ಪಿ.ಟಿ. ಹಟ್ಟಿ ಈರಣ್ಣ, ಜಿ.ಆರ್.‌ ತಿಪ್ಪೇಸ್ವಾಮಿ,ಗಂಗಾಧರ್‌, ನವೀನ್‌, ಎಂ. ಶಿವಪ್ಪ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.