ADVERTISEMENT

ಚಿತ್ರದುರ್ಗ: ಸ್ಥಳ ಮಹಜರ್‌ಗೆ ಮುರುಘಾ ಶರಣರನ್ನು ಮಠಕ್ಕೆ ಕರೆತಂದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2022, 7:24 IST
Last Updated 4 ಸೆಪ್ಟೆಂಬರ್ 2022, 7:24 IST
ಚಿತ್ರದುರ್ಗ: ಸ್ಥಳ ಮಹಜರ್‌ಗೆ ಮುರುಘಾ ಶರಣರನ್ನು ಮಠಕ್ಕೆ ಕರೆತಂದ ಪೊಲೀಸರು
ಚಿತ್ರದುರ್ಗ: ಸ್ಥಳ ಮಹಜರ್‌ಗೆ ಮುರುಘಾ ಶರಣರನ್ನು ಮಠಕ್ಕೆ ಕರೆತಂದ ಪೊಲೀಸರು   

ಚಿತ್ರದುರ್ಗ: ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಬಂಧಿತರಾಗಿರುವ ಶಿವಮೂರ್ತಿ ಮುರುಘಾ ಶರಣರನ್ನು ಪೊಲೀಸರು ಸ್ಥಳ ಮಹಜರ್‌ಗೆ ಮುರುಘಾ ಮಠಕ್ಕೆ ಭಾನುವಾರ ಕರೆತಂದರು.

ಪೊಲೀಸ್ ವಶದಲ್ಲಿರುವ ಆರೋಪಿಯನ್ನು ತನಿಖಾಧಿಕಾರಿಗಳು ಶುಕ್ರವಾರ ರಾತ್ರಿಯಿಂದ ವಿಚಾರಣೆಗೆ ಒಳಪಡಿಸಿದ್ದಾರೆ. ಭಾನುವಾರ ವಿಚಾರಣೆ ಮುಂದುವರಿಸಿದ ತನಿಖಾ ತಂಡ, ಬೆಳಿಗ್ಗೆ 11.45 ಮುರುಘಾ ಮಠಕ್ಕೆ ಕರೆತಂದರು. ಸೆ.1ರಂದು ರಾತ್ರಿ 10ಕ್ಕೆ ಬಂಧಿತರಾಗಿದ್ದ ಶರಣರು ಆರೋಪಿಯಾಗಿ ಮಠಕ್ಕೆ ಬಂದರು.

ಡಿವೈಎಸ್‌ಪಿ ಕಚೇರಿಯಿಂದ ರಾಷ್ಟ್ರೀಯ ಹೆದ್ದಾರಿ 48ರ ಮಾರ್ಗವಾಗಿ ಶರಣರನ್ನು ಮಠಕ್ಕೆ ಕರತರಲಾಯಿತು. ಮಠದ ಬಿಡಾರ, ಹಾಸ್ಟೆಲ್ ಗೆ ಕರೆದೊಯ್ದು ಮಹಜರು ಮಾಡಲಾಗುತ್ತಿದೆ. ಮಹಜರು ಸಂದರ್ಭದಲ್ಲಿ ಭಕ್ತರು, ಪ್ರವಾಸಿಗರ ಪ್ರವೇಶವನ್ನು ಪೊಲೀಸರು ನಿರ್ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.