ADVERTISEMENT

ಚಿತ್ರದುರ್ಗ: ಕೆರೆಯಂಗಳದ ಮಣ್ಣು ಸಾಗಣೆ; ದಂಡ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2021, 6:40 IST
Last Updated 4 ನವೆಂಬರ್ 2021, 6:40 IST
ಎನ್. ರಘುಮೂರ್ತಿ
ಎನ್. ರಘುಮೂರ್ತಿ   

ಚಳ್ಳಕೆರೆ: ಬಳ್ಳಾರಿ ರಸ್ತೆ ಮಾರ್ಗದ ಕರೆಕಲ್ ಕೆರೆಯಂಗಳದ ಮಣ್ಣನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಜೆಸಿಬಿ ವಾಹನ ಸೇರಿ 6 ಟ್ರ್ಯಾಕ್ಟರ್‌ಗಳನ್ನು ವಶಪಡಿಸಿಕೊಂಡು ಮಾಲೀಕರಿಗೆ ₹ 25 ಸಾವಿರ ದಂಡ ವಿಧಿಸಲಾಗಿದೆ ಎಂದು ತಹಶೀಲ್ದಾರ್ ಎನ್.ರಘುಮೂರ್ತಿ ತಿಳಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಾಲ್ಲೂಕಿನ ನಗರಂಗೆರೆ, ಮೀರಾಸಾಬಿಹಳ್ಳಿ, ದೊಡ್ಡೇರಿ, ಬೊಮ್ಮಸಮುದ್ರ, ನನ್ನಿವಾಳದ ಅಜ್ಜನಗುಡಿ ಕೆರೆ, ಚಿಕ್ಕಮಧುರೆ ಸೇರಿ ಹಲವು ಕೆರೆಯಂಗಳದ ಮಣ್ಣನ್ನು ಅಕ್ರಮವಾಗಿ ಸಾಗಾಣಿಕೆ ಮತ್ತು ಭೂಮಿ ಒತ್ತುವರಿಯ ಬಗ್ಗೆ ಆಯಾ ಗ್ರಾಮದ ಜನರಿಂದ ದೂರು ಬಂದಿವೆ.ಹೀಗಾಗಿ ತಾಲ್ಲೂಕಿನ ವಿವಿಧ ಗ್ರಾಮದ ಕೆರೆಯಂಗಳದ ಪರಿಶೀಲನೆ ಮಾಡಲು ಮುಂದಿನ ದಿನಗಳಲ್ಲಿ ಕಂದಾಯ ಅಧಿಕಾರಿಗಳು ಮತ್ತು ಪೋಲಿಸ್ ಅಧಿಕಾರಿಗಳ ತಂಡ ರಚಿಸಲಾಗುವುದು’ ಎಂದರು.

ಕೆರೆಯಂಗಳದ ಮಣ್ಣು ಅಕ್ರಮ ಸಾಗಾಣಿಕೆ ಮತ್ತು ಜಾಗ ಒತ್ತುವರಿಯ ತೆರವು ಕಾರ್ಯಾಚರಣೆ ನಡೆಸಲಾಗುವುದು.ಮಣ್ಣು ಸಾಗಾಣಿಕೆ ಮತ್ತು ಜಾಗ ಅತಿಕ್ರಮಣ ಮಾಡಿದವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.