ADVERTISEMENT

ಹೊಸದುರ್ಗದಲ್ಲಿ ಬಿರುಸಿನ ಮಳೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2020, 4:44 IST
Last Updated 11 ಅಕ್ಟೋಬರ್ 2020, 4:44 IST
ಹೊಸದುರ್ಗ ತಾಲ್ಲೂಕಿನಲ್ಲಿ ಶುಕ್ರವಾರ ರಾತ್ರಿ ಸುರಿದ ಬಿರುಸಿನ ಮಳೆಗೆ ಕಂಗುವಳ್ಳಿ ರಾಧಮ್ಮ ಅವರ ಮನೆ ಗೋಡೆ ಬಿದ್ದಿರುವುದು
ಹೊಸದುರ್ಗ ತಾಲ್ಲೂಕಿನಲ್ಲಿ ಶುಕ್ರವಾರ ರಾತ್ರಿ ಸುರಿದ ಬಿರುಸಿನ ಮಳೆಗೆ ಕಂಗುವಳ್ಳಿ ರಾಧಮ್ಮ ಅವರ ಮನೆ ಗೋಡೆ ಬಿದ್ದಿರುವುದು   

ಹೊಸದುರ್ಗ: ಪಟ್ಟಣದಲ್ಲಿ ಶನಿವಾರ ಬಿರುಸಿನ ಮಳೆ ಸುರಿಯಿತು.

ಹದ ಮಳೆಗೆ ಮುಖ್ಯರಸ್ತೆ ಬದಿಯ ತಗ್ಗು, ಗುಂಡಿ, ಚರಂಡಿಗಳಲ್ಲಿ ನೀರು ಹರಿಯಿತು. ಇಲ್ಲಿನ ಕೋಟೆ ಭಾಗದ ಮರಕಟ್ಟೆ ಹಾಗೂ ನಂಜಯ್ಯನಕೆರೆಗೆ ನೀರು ಹರಿದು ಬಂದಿದೆ.

ಶುಕ್ರವಾರ ರಾತ್ರಿ ಗುಡುಗು, ಸಿಡಿಲು ಸಹಿತ ಸುರಿದ ಬಿರುಸಿನ ಮಳೆಗೆ ತಾಲ್ಲೂಕಿನ ಕಂಗುವಳ್ಳಿ ರಾಧಮ್ಮ, ಕಾರೇಹಳ್ಳಿ ಗ್ರಾಮದ ಕರಿಯಪ್ಪ ಅವರ ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಎರಡು ಮನೆಗಳಿಂದ ₹ 40 ಸಾವಿರ ನಷ್ಟವಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಮಾಡದಕೆರೆ, ಮತ್ತೋಡು ಹೋಬಳಿಯ ಕೆಲವೆಡೆ ಬಿರುಸಿನ ಮಳೆಯಾಗಿದೆ. ಹಿರೇಹಳ್ಳ ಮತ್ತೆ ತುಂಬಿ ಹರಿಯುತ್ತಿದೆ. ಈ ಹಳ್ಳದ ವ್ಯಾಪ್ತಿಯಲ್ಲಿ ಇರುವ ಚೆಕ್‌ಡ್ಯಾಂ, ಬ್ಯಾರೇಜ್‌ಗಳು ತುಂಬಿ ಹರಿಯುತ್ತಿದ್ದು, ಮೀನು ಪ್ರಿಯರಿಂದ ಶಿಕಾರಿ ನಡೆಯಿತು. ಮಳೆ ಇಲ್ಲದೇ ಬಾಡಿದ್ದ ರಾಗಿ ಬೆಳೆಗೆ ಜೀವಕಳೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.