ಚಳ್ಳಕೆರೆ: ಬೀದಿನಾಯಿಗಳು ಕುರಿಹಟ್ಟಿ ಮೇಲೆ ದಾಳಿ ಮಾಡಿದ ಪರಿಣಾಮ ಎಂಟು ಕುರಿಮರಿಗಳು ಸಾವನ್ನಪ್ಪಿದ ಘಟನೆ ತಾಲ್ಲೂಕಿನ ಗೋಪನಹಳ್ಳಿ ಗ್ರಾಮದ ಜಿ.ಪಿ.ರಂಗಪ್ಪ ಬಡಾವಣೆಯಲ್ಲಿ ಗುರುವಾರ ನಡೆದಿದೆ.
ಕುರಿಮರಿಗಳು ಕುರಿಗಾಹಿ ಮಾರಪ್ಪ ಅವರಿಗೆ ಸೇರಿದ್ದು, ಅವುಗಳ ಸಾವಿನಿಂದ ₹ 40,000 ನಷ್ಟ ಸಂಭವಿಸಿದೆ ಎಂದು ಆಂದಾಜಿಸಲಾಗಿದೆ.
ಮರಿಗಳ ಸಾವಿನ ಕುರಿತು ಪರಿಶೀಲನೆ ನಡೆಸಿ ಇಲಾಖೆಯಿಂದ ಸಿಗಬಹುದಾದ ಪರಿಹಾರ ಕೊಡಿಸಲಾಗುವುದು ಎಂದು ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೇವಣ್ಣ ತಿಳಿಸಿದ್ದಾರೆ.
ಬೀದಿನಾಯಿಗಳಿಗೆ ಕಡಿವಾಣಕ್ಕೆ ಆಗ್ರಹ: ಬೀದಿನಾಯಿಗಳ ಹಾವಳಿಯಿಂದ ಗ್ರಾಮದ ಕುರಿ, ಮೇಕೆ ಹಾಗೂ ಎಮ್ಮೆಗಳು ಆಗಿಂದಾಗ್ಗೆ ಸಾವನ್ನಪ್ಪುತ್ತಿವೆ. ಗ್ರಾಮದಲ್ಲಿ ಎಲ್ಲೆಂದರಲ್ಲಿ ಗುಂಪು ಗುಂಪಾಗಾಗಿ ತಿರುಗಾಡುತ್ತಿರುವ ಬೀದಿನಾಯಿಗಳನ್ನು ಹಿಡಿದು ಬೇರೆಡೆಗೆ ಬಿಟ್ಟು ಬರಲು ಕ್ರಮ ಕೈಗೊಳ್ಳಬೇಕು ಎಂದು ಕುರಿಗಾಹಿ ತಿಪ್ಪೇಸ್ವಾಮಿ ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.