ADVERTISEMENT

ಕೋಟೆಯಲ್ಲಿ ಕಾಣಿಸಿಕೊಂಡ ಹೆಬ್ಬಾವು

​ಪ್ರಜಾವಾಣಿ ವಾರ್ತೆ
Published 23 ಮೇ 2022, 2:53 IST
Last Updated 23 ಮೇ 2022, 2:53 IST
ಚಿತ್ರದುರ್ಗದ ಕಲ್ಲಿನಕೋಟೆಯಲ್ಲಿ ಕಾಣಿಸಿಕೊಂಡ ಹೆಬ್ಬಾವನ್ನು ಉರಗಪ್ರೇಮಿ ಚೇತನ್‌ ರಕ್ಷಿಸಿದರು
ಚಿತ್ರದುರ್ಗದ ಕಲ್ಲಿನಕೋಟೆಯಲ್ಲಿ ಕಾಣಿಸಿಕೊಂಡ ಹೆಬ್ಬಾವನ್ನು ಉರಗಪ್ರೇಮಿ ಚೇತನ್‌ ರಕ್ಷಿಸಿದರು   

ಚಿತ್ರದುರ್ಗ: ಐತಿಹಾಸಿಕ ಕಲ್ಲಿನಕೋಟೆಯಲ್ಲಿ ಹೆಬ್ಬಾವು ಶನಿವಾರ ಕಾಣಿಸಿಕೊಂಡಿತ್ತು. ಉರಗಪ್ರೇಮಿ ಚೇತನ್‌ ಮತ್ತು ತಂಡ ಇದನ್ನು ರಕ್ಷಿಸಿ ಕಾಡಿಗೆ ಬಿಟ್ಟಿದೆ.

ಕೋಟೆಯ ಬನಶಂಕರಿ ದೇಗುಲದ ಸಮೀಪ ಭಾರಿ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದೆ. ನವಿಲು ನುಂಗಿ ಅದನ್ನು ಜೀರ್ಣಿಸಿಕೊಳ್ಳಲಾಗದೇ ಹೊರಗೆ ಹಾಕಿತ್ತು. ಈ ಬಗ್ಗೆ ಉರಗಪ್ರೇಮಿ ಚೇನತ್‌ಗೆ ಮಾಹಿತಿ ನೀಡಲಾಗಿತ್ತು ಎಂದು ಕೋಟೆಯ ಪ್ರವಾಸಿ ಗೈಡ್‌ ಮೋಹಿದ್ದೀನ್‌ ಖಾನ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT