ಚಿತ್ರದುರ್ಗ: ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಸಮೀಪದಹಳಿ ದಾಟುತ್ತಿದ್ದರೈತ ಮತ್ತು ಎತ್ತುಗಳಿಗೆರೈಲು ಡಿಕ್ಕಿ ಹೊಡೆದು ರೈತ ಹಾಗೂ ಎರಡು ಎತ್ತುಗಳು ಮೃತಪಟ್ಟಿವೆ.
ರಾಮಗಿರಿಯ ರೈತ ನಾಗಪ್ಪ (40) ಮೃತಪಟ್ಟವರು. ಡಿಕ್ಕಿಯ ರಭಸಕ್ಕೆ ಅವರ ಕೈಕಾಲುಗಳು ತುಂಡಾಗಿವೆ. ಎತ್ತುಗಳು ದಾರುಣವಾಗಿ ಮೃತಪಟ್ಟಿವೆ.
ಮಾನವ ರಹಿತ ರೈಲ್ವೆ ಕ್ರಾಸಿಂಗ್ನಲ್ಲಿ ನಾಗಪ್ಪ ಎತ್ತುಗಳೊಂದಿಗೆ ಸಾಗುತ್ತಿದ್ದರು. ಹಳಿ ದಾಟುವ ಧಾವಂತದಲ್ಲಿ ಇದ್ದಾಗ ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದಿದೆ. ಈ ಸಂಬಂಧ ದಾವಣಗೆರೆ ವಿಭಾಗದ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.