ADVERTISEMENT

ಒಕ್ಕಲಿಗರ ಸಂಘ: ಗೆಲುವಿನ ನಗೆ ಬೀರಿದ ರಾಜು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2021, 4:38 IST
Last Updated 16 ಡಿಸೆಂಬರ್ 2021, 4:38 IST
ರಾಜು
ರಾಜು   

ಚಿತ್ರದುರ್ಗ: ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ‌ ಸಮಿತಿಗೆ ನಡೆದ‌ ಚುನಾವಣೆಯಲ್ಲಿ ಬೇತೂರುಪಾಳ್ಯ ಜೆ.ರಾಜು ಗೆಲುವು ಸಾಧಿಸಿ ನಗೆ ಬೀರಿದ್ದಾರೆ.

ಜಿಲ್ಲೆಯಿಂದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಅವರು 1,150ಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಸಮೀಪದ ಸ್ಪರ್ಧಿ ಅಭಿಜಿತ್ ಬಿ.ಎಲ್. ಗೌಡ‌‌ ಅವರನ್ನು ಪರಾಭವಗೊಳಿಸಿ,‌ ‌ಸಂಘದ‌ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.

ಗೆಲುವಿನ‌ ಘೋಷಣೆ ಆಗುತ್ತಿದ್ದಂತೆ ಅಭಿಮಾನಿಗಳು ಹೂಮಾಲೆ ಹಾಕಿ ಮೆರವಣಿಗೆ ನಡೆಸಿದರು.

ADVERTISEMENT

‘ನನೆಗುದಿಗೆ ಬಿದ್ದಿರುವ‌ ಚಿತ್ರದುರ್ಗ, ಹಿರಿಯರು, ಚಳ್ಳಕೆರೆ ಒಕ್ಕಲಿಗ‌ ವಿದ್ಯಾರ್ಥಿ ನಿಲಯದ ‌ಕಟ್ಟಡ‌ ನಿರ್ಮಾಣ ಕಾರ್ಯವನ್ನು ತ್ವರಿತವಾಗಿ ಕೈಗೆತ್ತಿಕೊಂಡು ಪೂರ್ಣಗೊಳಿಸುತ್ತೇನೆ’ ಎಂದು ರಾಜು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.