ADVERTISEMENT

ಹಿರಿಯೂರು: 103 ಅಡಿ ತಲುಪಿದ ವಿ.ವಿ.ಸಾಗರ

ಅಚ್ಚುಕಟ್ಟು ರೈತರಲ್ಲಿ ಮೂಡಿದ ಮಂದಹಾಸ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2020, 5:51 IST
Last Updated 9 ಡಿಸೆಂಬರ್ 2020, 5:51 IST
103 ಅಡಿ ದಾಟಿದ ಸಂದರ್ಭದಲ್ಲಿ ಮಂಗಳವಾರ ಛತ್ರಿ ಬೆಟ್ಟದ ಮೇಲಿನಿಂದ ಕಂಡುಬಂದ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯ.
103 ಅಡಿ ದಾಟಿದ ಸಂದರ್ಭದಲ್ಲಿ ಮಂಗಳವಾರ ಛತ್ರಿ ಬೆಟ್ಟದ ಮೇಲಿನಿಂದ ಕಂಡುಬಂದ ಹಿರಿಯೂರು ತಾಲ್ಲೂಕಿನ ವಾಣಿವಿಲಾಸ ಜಲಾಶಯ.   

ಹಿರಿಯೂರು: ತಾಲ್ಲೂಕಿನ ವಾಣಿವಿಲಾಸ ಜಲಾಶಯದ ನೀರಿನ ಮಟ್ಟ ಮಂಗಳವಾರ ಬೆಳಿಗ್ಗೆ 103 ಅಡಿ ತಲುಪಿದ್ದು, ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಮಂದಹಾಸ ಮೂಡಿಸಿದೆ.

2019ರ ಜನವರಿಯಲ್ಲಿ ಜಲಾಶಯದ ನೀರಿನ ಮಟ್ಟ 102.50 ಅಡಿ ತಲುಪಿತ್ತು. ಅಚ್ಚುಕಟ್ಟು ಪ್ರದೇಶಕ್ಕೆ ಎರಡು ಬಾರಿ ಹಾಗೂ ವೇದಾವತಿ ನದಿಯ ಮೂಲಕ ಚಳ್ಳಕೆರೆ ಮತ್ತು ಮೊಳಕಾಲ್ಮುರು ಕ್ಷೇತ್ರಗಳಿಗೆ ನೀರು ಹರಿಸಿದ ಬಳಿಕ ನೀರಿನ ಮಟ್ಟ 86 ಅಡಿಗೆ ಇಳಿದಿತ್ತು. ಭದ್ರಾ ಮೇಲ್ದಂಡೆ ಯೋಜನೆ ನೀರು ಹರಿದು ಬರುತ್ತಿರುವುದರಿಂದ ಜಲಾಶಯದ ಮಟ್ಟ ಏರಿಕೆಯಾಗುತ್ತಿದೆ.

ಜಲಾಶಯವು 29,985 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದ್ದು, ಜಲಾಶಯದ ಪೂರ್ಣಮಟ್ಟ 130 ಅಡಿ. 30 ಟಿಎಂಸಿ ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. 1933ರಲ್ಲಿ ಒಮ್ಮೆ ಮಾತ್ರ ಭರ್ತಿಯಾಗಿರುವ ಜಲಾಶಯದಲ್ಲಿ 11 ಬಾರಿ 120 ಅಡಿಗಿಂತ ಹೆಚ್ಚು ನೀರು ಶೇಖರಣೆ ಆಗಿದೆ. ಭದ್ರಾ ಜಲಾಶಯದಿಂದ ನಿತ್ಯ 580ರಿಂದ 600 ಕ್ಯುಸೆಕ್ ನೀರು ಹರಿದು ಬರುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.