ಮಂಗಳೂರು: ಇದೇ 15ರಂದು ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಕೆಪಿಟಿಸಿಎಲ್ ವತಿಯಿಂದ 220 ಕೆವಿ ಎಸ್ಆರ್ಎಸ್ನಿಂದ ಹೊರಡುವ 110 ಕೆ.ವಿ ಕಾವೂರು- ಕೆಐಒಸಿಎಲ್ ಲೈನಿನಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಎಂಸಿಎಫ್, ಎಂಆರ್ಪಿಎಲ್, ಕೆಐಒಸಿಎಲ್, ರುಚಿಸೋಯ, ಎನ್ಎಂಪಿಟಿ, ಹೆಚ್ಪಿಸಿಎಲ್, ಯುಪಿಸಿಎಲ್, ಬಿಎಎಸ್ಎಫ್, ಬ್ರೈಟ್ ಪ್ಯಾಕೇಜರ್ಸ್, ರಾಜಶ್ರೀ ಪ್ಯಾಕೇಜರ್ಸ್, ಎಸ್ಇಜೆಡ್, ಪಣಂಬೂರು ಹಾಗೂ ಬೈಕಂಪಾಡಿ ವಿದ್ಯುತ್ ಉಪಕೇಂದ್ರದಿಂದ ವಿದ್ಯುತ್ ಸರಬರಾಜುಗೊಳ್ಳುವ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.
17ರಂದು ನಿಲುಗಡೆ: ಇದೇ 17ರಂದು ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ 33 ಕೆವಿ ಕಾವೂರು – ಮಣ್ಣಗುಡ್ಡ ಫೀಡರಿನಲ್ಲಿ ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ 33/11ಕೆವಿ ಕುದ್ರೋಳಿ ಹಾಗೂ 33/11ಕೆವಿ ಮಣ್ಣಗುಡ್ಡ ಉಪಕೇಂದ್ರಗಳಿಂದ ಹೊರಡುವ ಎಲ್ಲಾ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುವುದು. ಹೀಗಾಗಿ- ಕೊಟ್ಟಾರ, ಕೋಡಿಕಲ್, ಉರ್ವಸ್ಟೋರ್, ಅಶೋಕನಗರ, ಹೊೈಗೆಬೈಲ್, ದಂಬೇಲ್, ಉರ್ವ, ಬೋಳೂರು, ಚಿಲಿಂಬಿ, ಮಟದ ಕಣಿ, ಮಣ್ಣಗುಡ್ಡ, ಬೊಕ್ಕಪಟ್ನ, ಹ್ಯಾಟ್ಹಿಲ್, ಲೇಡಿಹಿಲ್, ಲಾಲ್ಭಾಗ್, ಬಲ್ಲಾಳ್ಬಾಗ್, ಎಂ.ಜಿ.ರೋಡ್, ಅಳಕೆ, ಕುದ್ರೋಳಿ, ಕೋಡಿಯಾಲ್ ಬೈಲ್, ಕೊಡಿಯಾಲ್ ಗುತ್ತು ಸುತ್ತಮುತ್ತ ವಿದ್ಯುತ್ ನಿಲುಗಡೆಯಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.