ADVERTISEMENT

ಕೋವಿಡ್: ದ.ಕ.ದಲ್ಲಿ 4 ಸಾವು

ಮತ್ತೆ ಮೂರು ಕಂಟೈನ್‌ಮೆಂಟ್‌ ವಲಯ

​ಪ್ರಜಾವಾಣಿ ವಾರ್ತೆ
Published 5 ಮೇ 2021, 5:35 IST
Last Updated 5 ಮೇ 2021, 5:35 IST
ಮಂಗಳೂರಿನ ಮಾರುಕಟ್ಟೆಯಲ್ಲಿ ತಳ್ಳುವ ಗಾಡಿಗಳಲ್ಲಿ ಖರೀದಿಗೆ ಮುಗಿಬಿದ್ದ ಜನರನ್ನು ಪೊಲೀಸರು ಕಳುಹಿಸಿದರು.
ಮಂಗಳೂರಿನ ಮಾರುಕಟ್ಟೆಯಲ್ಲಿ ತಳ್ಳುವ ಗಾಡಿಗಳಲ್ಲಿ ಖರೀದಿಗೆ ಮುಗಿಬಿದ್ದ ಜನರನ್ನು ಪೊಲೀಸರು ಕಳುಹಿಸಿದರು.   

ಮಂಗಳೂರು: ಮೃತಪಟ್ಟಿರುವ ನಾಲ್ವರಿಗೆ ಕೋವಿಡ್–19 ಇರುವುದು ಮಂಗಳವಾರ ದೃಢಪಟ್ಟಿದೆ. ಇದ ರೊಂದಿಗೆ ಜಿಲ್ಲೆಯಲ್ಲಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ 764ಕ್ಕೇರಿದೆ. ಜಿಲ್ಲೆಯಲ್ಲಿ ಮಂಗಳವಾರ 985 ಮಂದಿಗೆ ಕೋವಿಡ್ ದೃಢವಾಗಿದ್ದು, ಬಂದಿದೆ. ಮೂರು ಕಂಟೈನ್ಮೆಂಟ್ ವಲಯವನ್ನು ಘೋಷಣೆ ಮಾಡಲಾಗಿದೆ.

ಮೃತಪಟ್ಟ ನಾಲ್ವರು ಹಿರಿಯ ನಾಗರಿಕರಾಗಿದ್ದು, ನಗರದ ಬೇರೆ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.

ನಗರದ ಪದವಿನಂಗಡಿಯ ಒಂದು ಮನೆಯ 6 ಮಂದಿಗೆ, ನಾವೂರು ಪರ್ಲ ಚರ್ಚ್ ಹತ್ತಿರದ ಒಂದು ಮನೆಯ 5 ಮಂದಿಗೆ, ಬೆಳ್ತಂಗಡಿಯ ಬಳ್ಳಂಜ ಕುಕ್ಕುದಡ್ಕದ ಒಂದು ಮನೆಯ 5 ಮಂದಿಗೆ ಕೋವಿಡ್ ದೃಢವಾಗಿದ್ದು, ಮೂರು ಕಂಟೈನ್‌ಮೆಂಟ್ ವಲಯ ಎಂದು ಘೋಷಿಸಲಾಗಿದೆ.

ADVERTISEMENT

ಲಸಿಕೆ: ಜಿಲ್ಲೆಯಲ್ಲಿ ಮಂಗಳವಾರ 1,184 ಮಂದಿ ಕೋವಿಡ್ ನಿರೋಧಕ ಲಸಿಕೆಯನ್ನು ಪಡೆದಿದ್ದಾರೆ. 2–3 ದಿನಗಳಿಂದ ಲಸಿಕೆಯ ಅಭಾವ ಕಾಡಿತ್ತು. ಮಂಗಳವಾರ 7 ಸಾವಿರ ಡೋಸ್‌ ಲಸಿಕೆ ಜಿಲ್ಲೆಗೆ ಬಂದಿದ್ದು, ಬುಧವಾರದಿಂದ ಜಿಲ್ಲೆಯ ತಾಲ್ಲೂಕು, ಜಿಲ್ಲಾಸ್ಪತ್ರೆಯ ಜತೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ, ಉಪಕೇಂದ್ರ ಮಟ್ಟದಲ್ಲೂ ಲಸಿಕೆ ನೀಡಲಾಗುತ್ತದೆ. ಈಗ ಎರಡನೇ ಡೋಸ್‌ಗೆ ಮಾತ್ರ ಅವಕಾಶವಿದ್ದು, ಮೊದಲ ಡೋಸ್ ಪಡೆಯುವವರಿಗೆ ಸದ್ಯಕ್ಕೆ ಅವಕಾಶವಿಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಾಸರಗೋಡಿನಲ್ಲಿ 673 ಪ್ರಕರಣ: ಕಾಸರಗೋಡು ಜಿಲ್ಲೆಯಲ್ಲಿ 673 ಮಂದಿಗೆ ಕೋವಿಡ್‌–19 ದೃಢಪಟ್ಟಿದ್ದು, 98 ಮಂದಿ ಗುಣಮುಖರಾಗಿದ್ದಾರೆ. ಸದ್ಯ 12,370 ಸಕ್ರಿಯ ಪ್ರಕರಣ ಗಳಿದ್ದು, 15,685 ಮಂದಿ ನಿಗಾದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.