ಕಾಸರಗೋಡು: ಕುಣಿಯದಲ್ಲಿ ಮಂಗಳವಾರ ಕಾರು-ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದು, 5 ಮಂದಿ ಗಾಯಗೊಂಡಿದ್ದಾರೆ.
ಸ್ಕೂಟರ್ ಸವಾರರಾದ ತಲಕಳಾಯಿ ನಿವಾಸಿ ಎ.ನಾರಾಯಣನ್ ನಾಯರ್ (69), ಚಟ್ಟಂಚಾಲಿನ ಗೋಪಾಲಕೃಷ್ಣನ್ ನಾಯರ್ (58) ಮೃತಪಟ್ಟವರು.
ಕಾರಿನಲ್ಲಿದ್ದ 5 ಮಂದಿಗೆ ಗಾಯಗಳಾಗಿವೆ. ಮೃತರಿಬ್ಬರೂ ಸಂಬಂಧಿಕರಾಗಿದ್ದರು. ಎ.ನಾರಾಯಣನ್ ನಾಯರ್ ಸಿಪಿಸಿಆರ್ಐನ ನಿವೃತ್ತ ಸಿಬ್ಬಂದಿಯಾಗಿದ್ದು, ಅವರಿಗೆ ಪತ್ನಿ, ಒಬ್ಬ ಪುತ್ರ, ಪುತ್ರಿ ಇದ್ದಾರೆ. ಗೋಪಾಲಕೃಷ್ಣನ್ ನಾಯರ್ ಕೃಷಿಕರಾಗಿದ್ದರು. ಅವರಿಗೆ ಪತ್ನಿ, ಮೂವರು ಪುತ್ರಿಯರಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.