
ಪ್ರಜಾವಾಣಿ ವಾರ್ತೆಪಿಂಚಣಿ
ಐ ಸ್ಟಾಕ್ ಚಿತ್ರ
ಕಾಸರಗೋಡು: ಕಲಾವಿದರ ಒಕ್ಕೂಟ ಸವಾಕ್ ಜಿಲ್ಲಾ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಮಂಗಳವಾರ ಧರಣಿ ನಡೆಯಿತು.
ರಾತ್ರಿ 10 ಗಂಟೆ ನಂತರ ಧ್ವನಿವರ್ಧಕ ಬಳಸಿ ಕಲಾಕಾರ್ಯಕ್ರಮ ನಡೆಸಬಾರದು ಎಂಬ ಆದೇಶ ಹಿಂಪಡೆಯಬೇಕು. 60 ವರ್ಷ ಮೀರಿದ ಕಲಾವಿದರನ್ನೂ ಕಲ್ಯಾಣ ನಿಧಿ ಯೋಜನೆಯಲ್ಲಿ ಸೇರಿಸಬೇಕು. ಕಲ್ಯಾಣಯೋಜನೆಯ ಪಿಂಚಣಿಯನ್ನು
₹ 5 ಸಾವಿರ ಹೆಚ್ಚಿಸಲು ಆಗ್ರಹಿಸಿದರು.
ಸಮಿತಿ ಪ್ರಧಾನ ಕಾರ್ಯದರ್ಶಿ ಸುದರ್ಶನನ್ ವರ್ಣ ಉದ್ಘಾಟಿಸಿದರು. ರಾಜ್ಯ ಸಮಿತಿ ಕೋಶಾಧಿಕಾರಿ ಉಮೇಶ್ ಎಂ.ಸಾಲ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಎಂ.ಎಂ.ಗಂಗಾಧರನ್, ನರಸಿಂಹ ಬಲ್ಲಾಳ್, ಜೀನ್ ಲವಿನೋ ಮೊಂತೆರೊ, ಚಂದ್ರಹಾಸ ಕಯ್ಯಾರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.