
ಪ್ರಜಾವಾಣಿ ವಿಶೇಷದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ತಾಲ್ಲೂಕಿನ ಈ ಪ್ರಸಿದ್ಧ ಯಾತ್ರಾಸ್ಥಳ ವಿವಿಧ ಧರ್ಮಗಳ ನಡುವೆ ಸೌಹಾರ್ದ ಸಾರುವ ಕ್ಷೇತ್ರ ಬಪ್ಪನಾಡು. ಮುಸ್ಲಿಂ ಧರ್ಮದ ‘ಬಪ್ಪ ಬ್ಯಾರಿ’ ಎಂಬ ವ್ಯಾಪಾರಿ ಸುಮಾರು 800 ವರ್ಷಗಳ ಹಿಂದೆ ಇಲ್ಲಿನ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವನ್ನು ಕಟ್ಟಿಸಿದ್ದ ಎಂಬುದು ಪ್ರತೀತಿ. ಶಾಂಭವೀ ನದಿ ದಂಡೆಯಲ್ಲಿರುವ ಈ ಕ್ಷೇತ್ರದ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ನಡೆಯುವ ಶಯನೋತ್ಸವ ಇಲ್ಲಿನ ವಿಶೇಷ ಆಚರಣೆಗಳಲ್ಲೊಂದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.