ADVERTISEMENT

ಕಾಸರಗೋಡು: ಲಂಚ ಪಡೆಯುತ್ತಿದ್ದ ಗ್ರಾಮಾಧಿಕಾರಿ, ಸಹಾಯಕ ಬಂಧನ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2023, 12:35 IST
Last Updated 25 ಆಗಸ್ಟ್ 2023, 12:35 IST
ಬಂಧನ (ಸಾಂದರ್ಭಿಕ ಚಿತ್ರ)
ಬಂಧನ (ಸಾಂದರ್ಭಿಕ ಚಿತ್ರ)   

ಕಾಸರಗೋಡು: ಲಂಚ ಪಡೆಯುತ್ತಿದ್ದ ಆರೋಪದಲ್ಲಿ ಚಿತ್ತಾರಿ ಗ್ರಾಮಾಧಿಕಾರಿ, ಕೊಡಕ್ಕಾಡ್ ವೆಳ್ಳಚ್ಚಾಲ್ ನಿವಾಸಿ ಸಿ.ಅರುಣ್ (40) ಮತ್ತು ಸಹಾಯಕ ಗ್ರಾಮಾಧಿಕಾರಿ, ಪಿಲಿಕೋಡ್ ವರಕ್ಕಾಡ್ ವಯಲ್ ನಿವಾಸಿ ಕೆ.ವಿ.ಸುಧಾಕರನ್ (52) ಎಂಬವರನ್ನು ಜಾಗೃತ ದಳ ಬಂಧಿಸಿದೆ.

ಜಾಗೃತ ದಳದ ಡಿವೈಎಸ್‌ಪಿ ವಿ.ಕೆ.ವಿಶ್ವಂಭರನ್ ನೇತೃತ್ವದ ತಂಡ ಶುಕ್ರವಾರ ಚಿತ್ತಾರಿ ಗ್ರಾಮಕಚೇರಿಗೆ ದಾಳಿ ನಡೆಸಿತ್ತು. ಚಾಮುಂಡಿಕುನ್ನು ರಸ್ತೆಯ ಕಾಟಿಲಂಗಾಡ್ ಎಂಬಲ್ಲಿನ ಜಾಗವೊಂದಕ್ಕೆ ಸಂಬಂಧಿಸಿದ ವಿಚಾರದಲ್ಲಿ ಅರ್ಜಿ ಸ್ವೀಕಾರಕ್ಕೆ ಲಂಚ ನೀಡುವಂತೆ ಆರೊಪಿಗಳು ಅರ್ಜಿದಾರರೊಬ್ಬರಲ್ಲಿ ಕೇಳಿದ್ದರು. ಗ್ರಾಮಾಧಿಕಾರಿಗೆ ₹ 2 ಸಾವಿರ, ಸಹಾಯಕ ಗ್ರಾಮಾಧಿಕಾರಿ ₹ 1 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಅಧಿಕಾರಿಗಳು ದಾಳಿ ನಡೆಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT