ADVERTISEMENT

ಕಾರು ಡಿಕ್ಕಿ: ಮೇಳದ ಸಿಬ್ಬಂದಿ ಸಾವು

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2023, 5:09 IST
Last Updated 16 ಏಪ್ರಿಲ್ 2023, 5:09 IST

ಮಂಗಳೂರು: ಧರ್ಮಸ್ಥಳ ಯಕ್ಷಗಾನ ಮೇಳದ ಸಿಬ್ಬಂದಿಯೊಬ್ಬರು ಮುಕ್ಕ ಬಳಿ ರಾಷ್ಟ್ರೀಯ ಹೆದ್ದಾರಿ–66ರಲ್ಲಿ ರಸ್ತೆ ದಾಟುವಾಗ ಕಾರು ಡಿಕ್ಕಿ ಹೊಡೆದು ಶುಕ್ರವಾರ ಮೃತಪಟ್ಟಿದ್ದಾರೆ.

ಮೇಳದ ಸಿಬ್ಬಂದಿ ಜೀವನ್ ಕುಮಾರ್ (36) ಮೃತರು. ಮುಕ್ಕಾದ ಸತ್ಯ ಧರ್ಮ ದೇವಸ್ಥಾನದಲ್ಲಿ ಧರ್ಮಸ್ಥಳದ ಮೇಳದವರು ಉಳಿದುಕೊಂಡಿದ್ದರು. ಮೇಳದ ಪೂಜಾ ಸಾಮಾಗ್ರಿಗಳನ್ನು ತರಲು ಜೀವನ್‌ ಕುಮಾರ್‌ ರಸ್ತೆ ಆಚೆಯ ಅಂಗಡಿಗೆ ಭೇಟಿ ನೀಡಿದ್ದರು. ರಸ್ತೆ ದಾಟುವಾಗ ಸುರತ್ಕಲ್‌ ಕಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿತ್ತು. ಅವರು ಸ್ಥಳದಲ್ಲೇ ಅಸುನೀಗಿದ್ದರು.

ಧರ್ಮಸ್ಥಳ ಮೇಳದ ಗಿರೀಶ್‌ ಹೆಗ್ಡೆ ಬಿ.ಎನ್‌. ದೂರು ನೀಡಿದ್ದು, ಸಂಚಾರ ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.