ಕಾಸರಗೋಡು: ಚಂದ್ರಯಾನ-3 ಯಶಸ್ವಿ ತಂಡದಲ್ಲಿ ಕಾಸರಗೋಡು ಸಮೀಪದ ಚೆರ್ಕಳ ಎರಿಯಪ್ಪಾಡಿ ನಿವಾಸಿ, ವಿಜ್ಞಾನಿ ಕೃಷ್ಣ ಮೋಹನ ಶ್ಯಾನುಭೋಗ್ ಭಾಗವಹಿಸಿದ್ದಾರೆ.
ಅವರು ಎರಿಯಪ್ಪಾಡಿಯ ವಿಷ್ಣು ಶ್ಯಾನುಭೋಗ್ ಅವರ ಪುತ್ರ. ಪಾಡಿ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಅವರು ನಗರದ ಬಿ.ಇ.ಎಂ. ಪ್ರೌಢಶಾಲೆಯ 1981ರಲ್ಲಿ ಎಸ್ಸೆಸ್ಸೆಲ್ಸಿ ಉತ್ತೀರ್ಣರಾಗಿದ್ದರು. ಬಳಿಕ ಅವರು ಸುರತ್ಕಲ್, ಭೂಪಾಲದಲ್ಲಿ ಉನ್ನತ ಶಿಕ್ಷಣ ಪಡೆದಿದ್ದಾರೆ. ಅವರು ಪ್ರಸ್ತುರ ಇಸ್ರೋದ ಬೆಂಗಳೂರು ಶಾಖೆಯಲ್ಲಿ ಸೇವೆಯಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.