ಮಂಗಳೂರು: ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ನಗರದ ಬೈಕಂಪಾಡಿ ವಿದ್ಯಾರ್ಥಿ ಸಂಘದ ಸಭಾಭವನದಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ ಮಕ್ಕಳ ನಾಟಕದ ರಂಗ ಪರಿಕರ ಕಾರ್ಯಾಗಾರವನ್ನು ರೋಟರಿ ಮಂಗಳೂರು ಪೂರ್ವದ ಅಧ್ಯಕ್ಷ ಎನ್.ವಿನೋದ್ ಕುಡ್ವ ಭಾನುವಾರ ಉದ್ಘಾಟಿಸಿದರು.
‘ಮಕ್ಕಳನ್ನು ಸೃಜನಶೀಲರನ್ನಾಗಿ ಮಾಡಲು ರಂಗಭೂಮಿ ಚಟುವಟಿಕೆಗಳು ಅಗತ್ಯವಾಗಿವೆ. ಮಕ್ಕಳ ರಂಗಭೂಮಿಯಿಂದ ವ್ಯಕ್ತಿತ್ವ ವಿಕಸನ ಸಾಧ್ಯ. ನಾಟಕಗಳು ಮಕ್ಕಳ ಮನಸಿನಲ್ಲಿವ ಹೊಸ ಚಿಂತನೆಗಳನ್ನು ಹುಟ್ಟುಹಾಕುತ್ತವೆ. ಮಕ್ಕಳ ರಂಗಭೂಮಿ ಇನ್ನಷ್ಟು ಬೆಳೆಯಬೇಕು’ ಎಂದು ಶುಭ ಹಾರೈಸಿದರು.
ರಂಗನಟಿ, ಸಂಘಟಕಿ ಆರತಿ ಆಳ್ವ ಬಜಾಲ್, ರಂಗಸಂಗಾತಿಯ ಸಂಚಾಲಕ ಕರುಣಾಕರ ಶೆಟ್ಟಿ, ಶಿಕ್ಷಕ ಪ್ರೇಮನಾಥ ಮರ್ಣೆ, ಕಾರ್ಯಾಗಾರದ ನಿರ್ದೇಶಕ ಮೈಮ್ ರಾಮ್ದಾಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.