ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕೋವಿಡ್– 19 ಸಹಾಯವಾಣಿ ಘಟಕದಿಂದ ನಗರದ ಅತ್ತಾವರದ ಕೆ.ಎಂ.ಸಿ.ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಲಾಯಿತು.
ಶಾಸಕ ಯು.ಟಿ.ಖಾದರ್ ಹಾಗೂ ಸಹಾಯವಾಣಿ ಘಟಕದ ಸಂಚಾಲಕ ಐವನ್ ಡಿಸೋಜ ನೇತೃತ್ವದಲ್ಲಿ ಆಸ್ಪತ್ರೆಯ ಆಡಳಿತ ಮಂಡಳಿಯವರೊಂದಿಗೆ ಚರ್ಚೆ ನಡೆಸಲಾಯಿತು. ಆಸ್ಪತ್ರೆಯ ವೈದ್ಯಾಧಿಕಾರಿಗಳ ತಂಡವು ಕೋವಿಡ್–19 ರೋಗಿಗಳಿಗೆ ಯಾವ ರೀತಿಯ ಚಿಕಿತ್ಸೆ ನೀಡಲಾಗುತ್ತಿದೆ ಎಂಬುದರ ಕುರಿತು ಮಾಹಿತಿ ನೀಡಿದರು.
ಐವನ್ ಡಿಸೋಜ ಮಾತನಾಡಿ, ‘ಕೆಎಂಸಿ ಆಸ್ಪತ್ರೆಯು ಹಲವಾರು ವರ್ಷಗಳಿಂದ ಜನಸಾಮಾನ್ಯರಿಗೆ ಉತ್ತಮ ಚಿಕಿತ್ಸೆ ನೀಡುತ್ತ ಬಂದಿದೆ. ಕೋವಿಡ್– 19 ಸಂದರ್ಭದಲ್ಲೂ ರೋಗಿಗಳಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆದರೆ ಆಸ್ಪತ್ರೆಯಲ್ಲಿ ವೆಂಟಿಲೇಟರ್ಗಳ ಹೆಚ್ಚಿಸಬೇಕಾದಂತಹ ಅಗತ್ಯವಿದೆ’ ಎಂದು ಹೇಳಿದರು.
ಶಾಸಕ ಯು.ಟಿ. ಖಾದರ್ ಮಾತನಾಡಿ, ಚಿಕಿತ್ಸಾ ಕ್ರಮಗಳ ಕುರಿತು ಆಸ್ಪತ್ರೆಯ ಆಡಳಿತ ಮಂಡಳಿಗೆ ಕೆಲವು ಸಲಹೆ ನೀಡಿ, ಸರ್ಕಾರಿ ಯೋಜನೆಗಳು ಜನಸಾಮಾನ್ಯರಿಗೆ ದೊರಕಬೇಕು ಎಂದು ತಿಳಿಸಿದರು.
ಆಸ್ಪತ್ರೆ ಆಡಳಿತ ಮಂಡಳಿಯು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿತು. ಸಹಾಯವಾಣಿಯ ಶಶಿಧರ್ ಹೆಗ್ಡೆ, ಪ್ರವೀಣ್ಚಂದ್ರ ಆಳ್ವ, ಎ.ಸಿ. ವಿನಯರಾಜ್, ಅಶ್ರಫ್ ಬಜಾಲ್, ಅನಿಲ್ ಕುಮಾರ್, ಜೆಸಿಂತಾ ವಿಜಯಾ ಆಲ್ಫ್ರೇಡ್, ವಿಶ್ವಾಸ್ಕುಮಾರ್ ದಾಸ್, ಆಶಿತ್ ಪಿರೇರಾ, ಶೌವಾದ್ ಗೂನಡ್ಕ, ರಮಾನಂದ್ ಪೂಜಾರಿ, ಶೋಭಾ ಕೇಶವ್, ಚೇತನ್ ಉರ್ವ, ಮಹೇಶ್ ಕೋಡಿಕ್ಕಲ್, ಪ್ರೇಮ್ ಬಳ್ಳಾಲ್ಬಾಗ್, ನವಾಜ್ ಜೆಪ್ಪು, ಮಿಲಾಜ್ ಅತ್ತಾವರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.