ಮಂಗಳೂರು: ಸಂಪೂರ್ಣ ಲಾಕ್ಡೌನ್ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾನುವಾರ ಮುಸ್ಲಿಮರು ತಮ್ಮ ತಮ್ಮ ಮನೆಗಳಲ್ಲಿ ಈದ್ ಉಲ್ ಫಿತ್ರ್ ಸರಳವಾಗಿ ಆಚರಿಸಿದರು.
ಕುಟುಂಬದವರೆಲ್ಲ ಒಟ್ಟು ಸೇರಿ ಮನೆಯಲ್ಲಿಯೇ ಹಬ್ಬದ ವಿಶೇಷ ನಮಾಜನ್ನು ನಿರ್ವಹಿಸಿ, ಬಳಿಕ ಪರಸ್ಪರ ಶುಭಾಶಯ ಕೋರಿದರು.
ಲಾಕ್ಡೌನ್ ಕಾರಣ ಮಸೀದಿ ಅಥವಾ ಸಾಮೂಹಿಕವಾಗಿ ಈದ್ ನಮಾಜ್ ನಿರ್ವಹಿಸಲು ಅವಕಾಶ ಇರಲಿಲ್ಲ. ಇದರಿಂದ ನಗರದ ಬಾವುಟ ಗುಡ್ಡ ಸೇರಿದಂತೆ ಬಹುತೇಕ ಪ್ರಾರ್ಥನಾ ಮೈದಾನಗಳಲ್ಲಿ ಹಬ್ಬದ ರಂಗು ಇರಲಿಲ್ಲ. ರಸ್ತೆಗಳೂ ಬಿಕೋ ಎನ್ನುತ್ತಿದ್ದವು. ಕೆಲವು ಮಸೀದಿಗಳಿಂದ ಈದ್ ಸಂದೇಶವನ್ನು ಯೂಟ್ಯೂಬ್ ಮೂಲಕ ನೀಡಲಾಯಿತು. ಸರಳ ಈದ್ ಆಚರಿಸುವಂತೆ ಖಾಜಿ ಸಂದೇಶ ನೀಡಿದ್ದ ಹಿನ್ನೆಲೆಯಲ್ಲಿ ಈದ್ ಹಿಂದಿನ ದಿನಗಳಲ್ಲಿ ಬಟ್ಟೆ ಇತ್ಯಾದಿ ಖರೀದಿಯ ಅಬ್ಬರವೂ ಇರಲಿಲ್ಲ.
ಹಬ್ಬ ಹಾಗೂ ಲಾಕ್ಡೌನ್ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.