
ಉಳ್ಳಾಲ: ಇಲ್ಲಿನ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ವತಿಯಿಂದ ಫೆ.4ರಂದು ನಡೆಯುವ ವೀರರಾಣಿ ಅಬ್ಬಕ್ಕ ಉತ್ಸವದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮಾಜಿ ಶಾಸಕ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷ ಕೆ.ಜಯರಾಮ ಶೆಟ್ಟಿ ಹೇಳಿದರು.
2022-23ರ ವೀರರಾಣಿ ಅಬ್ಬಕ್ಕ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಉಳ್ಳಾಲ ಚೀರುಂಭ ಭಗವತಿ ಕ್ಷೇತ್ರದ ಪ್ರಧಾನ ಗುರಿಕಾರರಾದ ಮಂಜಪ್ಪಕಾರ್ನವರ್ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.
ಸಮಿತಿ ಅಧ್ಯಕ್ಷ ದಿನಕರ ಉಳ್ಳಾಲ್, ಗೌರವ ಉಪಾಧ್ಯಕ್ಷ ಸದಾನಂದ ಬಂಗೇರ, ಉಪಾಧ್ಯಕ್ಷ ಯು.ಪಿ.ಆಲಿಯಬ್ಬ, ಕಾರ್ಯದರ್ಶಿ ಡಿ.ಎನ್.ರಾಘುವ, ಎಂ.ವಾಸುದೇವರಾವ್, ಸತೀಶ್ ಭಂಡಾರಿ, ಭಾಸ್ಕರ, ರತ್ನಾವತಿ ಜೆ. ಬೈಕಾಡಿ, ಶಶಿಕಲಾ ಗಟ್ಟಿ, ಅನುಪಮ ಸಿ, ಹೇಮಾ ಯು, ವಾಣಿ ಲೋಕಯ್ಯ, ಕ್ಲೇರಾ ಕುವೆಲ್ಲೊ, ಮಾಧವಿ ಉಳ್ಳಾಲ್, ಸತ್ಯವತಿ ಜೆ.ಕೆ, ದೇವಕಿಯು ಬೋಳಾರ್, ಸುಷ್ಮಾ ಜನಾರ್ದನ್, ರಾಜೀವಿ ಕೆಂಪುಮಣ್ಣು, ಸೇವಂತಿ ಶ್ರೀಯಾನ್, ಲತಾ ಶೀಧರ್, ಸುಮಂಗಲ ಸಿ. ಕೋಟ್ಯಾನ್, ಭಾನುಮತಿ, ಮಲ್ಲಿಕಾ ಉಳ್ಳಾಲ್ಬೈಲ್, ಸ್ವಪ್ನಾ ಶೆಟ್ಟಿ, ಸುಜಾತಾ ಇದ್ದರು.
ಪ್ರಧಾನ ಕಾರ್ಯದರ್ಶಿ ಧನಲಕ್ಷ್ಮಿ ಗಟ್ಟಿ ಸ್ವಾಗತಿಸಿದರು. ಕೋಶಾಧಿಕಾರಿ ಆನಂದ ಕೆ. ಅಸೈಗೋಳಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.