ADVERTISEMENT

ಕಾಸರಗೋಡು | ಫ್ಲೈ ಓವರ್ ಬೇಡಿಕೆ: ಆ.24ರಂದು ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2023, 12:55 IST
Last Updated 22 ಆಗಸ್ಟ್ 2023, 12:55 IST
 ಪ್ರತಿಭಟನೆ (ಪ್ರಾತಿನಿಧಿಕ ಚಿತ್ರ)
ಪ್ರತಿಭಟನೆ (ಪ್ರಾತಿನಿಧಿಕ ಚಿತ್ರ)   

ಕಾಸರಗೋಡು: ನಾಯನ್ಮಾರುಮೂಲೆಯಲ್ಲಿ ಫ್ಲೈ ಓವರ್ ನಿರ್ಮಿಸುವಂತೆ ಆಗ್ರಹಿಸಿ ಸ್ಥಳೀಯ ರಾಷ್ಟ್ರೀಯ ಹೆದ್ದಾರಿ ಕ್ರಿಯಾ ಸಮಿತಿ ನಡೆಸುತ್ತಿರುವ ಮುಷ್ಕರ 150ನೇ ದಿನಕ್ಕೆ ಕಾಲಿರಿಸುತ್ತಿರುವುದರಿಂದ ಆ.24ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ನಡೆಯಲಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕ್ರಿಯಾ ಸಮಿತಿ ಸಂಚಾಲಕ ಖಾದರ್ ಪಾಲೋತ್, ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿಗಳನ್ನು ಸಲ್ಲಿಸುತ್ತಿದ್ದರೂ, ಈ ಬಗ್ಗೆ ಸ್ಪಂದಿಸುತ್ತಿಲ್ಲ ಎಂದು ಈ ಪ್ರತಿಭಟನೆ ನಡೆಸಲಾಗುತ್ತಿದೆ ಎಂದರು.

ಸಮಿತಿ ಪದಾಧಿಕಾರಿಗಳಾದ ಅಚ್ಚು ಪಿ.ಬಿ., ಅಲಾವುದ್ದೀನ್, ಮುಹಮ್ಮದ್ ಅಸ್ಲಂ ಎ.ಎಲ್., ಬದ್ರುಲ್ ಮುನೀರ್ ಎ.ಕೆ., ಬದ್ರುದ್ದೀನ್ ಟಿ.ಎ., ಬಶೀರ್ ಕಡವತ್, ಕರೀಂ ನಾಯನ್ಮಾರುಮೂಲೆ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.