ADVERTISEMENT

ಕಾನ: ರಸ್ತೆ ದುರಸ್ತಿಗೆ 15 ದಿನ ಗಡುವು

ರಸ್ತೆ ದುರವಸ್ಥೆ: ಡಿವೈಎಫ್‌ಐಯಿಂದ ಪ್ರತಿಕೃತಿ ದಹಿಸಿ ಪ್ರತಿಭಟನೆ, ಆಕ್ರೋಶ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2021, 4:44 IST
Last Updated 14 ಡಿಸೆಂಬರ್ 2021, 4:44 IST
ಮಂಗಳೂರು ಸಮೀಪದ ಸುರತ್ಕಲ್– ಕಾನ ರಸ್ತೆ ದುರಸ್ತಿ ಮಾಡಿಸದ ಮಹಾನಗರ ಪಾಲಿಕೆಯ ಬೇಜವಾಬ್ದಾರಿತನ ಖಂಡಿಸಿ, ಕಾನ ಜಂಕ್ಷನ್‌ನಲ್ಲಿ ಡಿವೈಎಫ್ಐ ನೇತೃತ್ವದಲ್ಲಿ ಪಾಲಿಕೆ ಪ್ರತಿಕೃತಿ ದಹನ, ಪ್ರತಿಭಟನೆ ನಡೆಯಿತು.ಪ್ರಮುಖರಾದ ಮುನೀರ್‌ ಕಾಟಿಪಳ್ಳ, ಇಮ್ತಿಯಾಜ್‌, ಕಾರ್ಯಕರ್ತರು ಇದ್ದರು.
ಮಂಗಳೂರು ಸಮೀಪದ ಸುರತ್ಕಲ್– ಕಾನ ರಸ್ತೆ ದುರಸ್ತಿ ಮಾಡಿಸದ ಮಹಾನಗರ ಪಾಲಿಕೆಯ ಬೇಜವಾಬ್ದಾರಿತನ ಖಂಡಿಸಿ, ಕಾನ ಜಂಕ್ಷನ್‌ನಲ್ಲಿ ಡಿವೈಎಫ್ಐ ನೇತೃತ್ವದಲ್ಲಿ ಪಾಲಿಕೆ ಪ್ರತಿಕೃತಿ ದಹನ, ಪ್ರತಿಭಟನೆ ನಡೆಯಿತು.ಪ್ರಮುಖರಾದ ಮುನೀರ್‌ ಕಾಟಿಪಳ್ಳ, ಇಮ್ತಿಯಾಜ್‌, ಕಾರ್ಯಕರ್ತರು ಇದ್ದರು.   

ಸುರತ್ಕಲ್‌: ಕಾನ, ಸುರತ್ಕಲ್, ಎಂಆರ್‌ಪಿಎಲ್, ಜನತಾ ಕಾಲೊನಿ ರಸ್ತೆ ಹದಗೆಟ್ಟಿದ್ದು, ಗುಂಡಿಗಳನ್ನು ಮುಚ್ಚದ ಮಹಾನಗರ ಪಾಲಿಕೆ ಬೇಜವಾಬ್ದಾರಿತನ ಖಂಡಿಸಿ, ಕಾನ ಜಂಕ್ಷನ್‌ನಲ್ಲಿ ಡಿವೈಎಫ್ಐ ನೇತೃತ್ವದಲ್ಲಿ ಮೆರವಣಿಗೆ, ಪಾಲಿಕೆ ಪ್ರತಿಕೃತಿ ದಹನ ಪ್ರತಿಭಟನೆ ನಡೆಯಿತು. 15 ದಿನಗಳಲ್ಲಿ ರಸ್ತೆ ದುರಸ್ತಿ ಆಗದಿದ್ದರೆ ಸ್ಥಳೀಯ ಶಾಸಕರ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಪ್ರತಿಭಟನಕಾರರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಡಿವೈಎಫ್ಐ ರಾಜ್ಯ ಘಟಕದ ಅಧ್ಯಕ್ಷ ಮುನೀರ್ ಕಾಟಿಪಳ್ಳ, ‘ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವುದರಲ್ಲಿ ಶಾಸಕ ಭರತ್ ಶೆಟ್ಟಿ ವಿಫಲರಾಗಿದ್ದಾರೆ. ಹಿಂದಿನ ಶಾಸಕರ ಅವಧಿಯಲ್ಲಿ ಮಂಜೂರಾಗಿದ್ದ ಹೊಸ ರಸ್ತೆ ನಿರ್ಮಾಣ ಯೋಜನೆ ಭರತ್ ಶೆಟ್ಟಿ ಅವರ ನಿರ್ಲಕ್ಷ್ಯದಿಂದ ರದ್ದಾಗಿದೆ. ಸುರತ್ಕಲ್, ಕೃಷ್ಣಾಪುರ ಮಾರುಕಟ್ಟೆ ಕಾಮಗಾರಿಗಳಿಗೂ ತಡೆ ಬಿದ್ದಿದೆ. ಅಭಿವೃದ್ಧಿ ಕಾರ್ಯ ನಡೆಸಲಾಗದ ಭರತ್ ಶೆಟ್ಟರು ಮತೀಯ ಭಾವನೆಗಳನ್ನು ಕೆರಳಿಸಿ ತಮ್ಮ ವೈಫಲ್ಯಗಳನ್ನು ಮುಚ್ಚಿಡಲು ನೋಡುತ್ತಿದ್ದಾರೆ’ ಎಂದು ಆರೋಪಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಬಿ. ಕೆ. ಇಮ್ತಿಯಾಜ್ ಮಾತನಾಡಿದರು. ಡಿವೈಎಫ್ಐ ಪ್ರಮುಖರಾದ ಶ್ರೀನಾಥ್ ಕುಲಾಲ್, ಮಕ್ಸೂದ್ ಬಿ. ಕೆ., ಅಜ್ಮಲ್ ಅಹ್ಮದ್, ಜೋಯ್ ಡಿಸೋಜ, ಮುಹಮ್ಮದ್, ಜಾಯ್, ಅಬೂಬಕ್ಕರ್ ಬಾವಾ, ನವಾಜ್ ಕುಳಾಯಿ, ಗಿರೀಶ್ ಜನತಾಕಾಲೊನಿ, ಮೆಹಬೂಬ್ ಖಾನ್, ಫ್ರಾನ್ಸಿಸ್ ಕಾನ, ಟ್ಯಾಂಕರ್ ಚಾಲಕರ ಸಂಘದ ಅಧ್ಯಕ್ಷ ಬಾಲು, ರಿಕ್ಷಾ ಚಾಲಕರ ಸಂಘದ ಪ್ರಮುಖರಾದ ಹಂಝ, ಇಬ್ರಾಹಿಂ, ಲಕ್ಷ್ಮೀಶ , ಬಶೀರ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.