ADVERTISEMENT

ಕಾಸರಗೋಡು: ಗಿಳಿವಿಂಡುವಿನಲ್ಲಿ ಗಾಂಧಿ ಜಯಂತಿ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2023, 13:07 IST
Last Updated 2 ಅಕ್ಟೋಬರ್ 2023, 13:07 IST
ಮಂಜೇಶ್ವರ ಗೋವಿಂದ ಪೈ ನಿವಾಸ ‘ಗಿಳಿವಿಂಡು‘
ಮಂಜೇಶ್ವರ ಗೋವಿಂದ ಪೈ ನಿವಾಸ ‘ಗಿಳಿವಿಂಡು‘   

ಕಾಸರಗೋಡು: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಅವರ ನಿವಾಸ ಗಿಳಿವಿಂಡುವಿನಲ್ಲಿ ಗಾಂಧಿ ಜಯಂತಿ ನಡೆಯಿತು.

ಮಂಜೇಶ್ವರ ಸರ್ಕಾರಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಮನೆಯ ಆವರಣದ ಸ್ವಚ್ಛರಾ ಕಾರ್ಯ ನಡೆಯಿತು.

ಮಂಜೇಶ್ವರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜೀನ್ ಲೆವೀನಾ ಮೊಂತೆರೊ ಉದ್ಘಾಟಿಸಿದರು. ಸಾಹಿತಿಗಳಾದ ಪ್ರೊ.ಕೃಷ್ಣ ಭಟ್, ನರೇಂದ್ರ ರೈ ದೇರ್ಲ, ದೇವಿಕಾ ಎ.ಕೆ., ವಿಜಯ ಕುಮಾರ್ ಪಾವಲ, ಕಮಲಾಕ್ಷ ಕನಿಲ ಇದ್ದರು.

ADVERTISEMENT

ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಉಮೇಶ್ ಎಂ.ಸಾಲ್ಯಾನ್ ಸ್ವಾಗತಿಸಿದರು. ಕೋಶಾಧಿಕಾರಿ ಬಾಲಕೃಷ್ಣ ಶೆಟ್ಟಿಗಾರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.