ADVERTISEMENT

ಮಂಗಳೂರು | ಧಾರಾಕಾರ ಮಳೆ: ಗಣೇಶೋತ್ಸವ ‌ಸಂಭ್ರಮಕ್ಕೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2025, 5:24 IST
Last Updated 28 ಆಗಸ್ಟ್ 2025, 5:24 IST
   

ಮಂಗಳೂರು: ಬುಧವಾರ ಸಂಜೆಯಿಂದ ಎಡೆಬಿಡದೆ ಸುರಿಯುತ್ತಿರುವ‌ ಮಳೆ, ಗುರುವಾರ ಬೆಳಿಗ್ಗೆಯಿಂದ‌ ಇನ್ನಷ್ಟು ಬಿರುಸಾಗಿದೆ‌.

ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮಳೆಯಾಗುತ್ತಿದೆ. ಧಾರಾಕಾರ ಮಳೆಯಿಂದಾಗಿ ತಾತ್ಕಾಲಿಕವಾಗಿ ನಿರ್ಮಿಸಿರುವ ಸಾರ್ವಜನಿಕ ಗಣೇಶೋತ್ಸವ ಮಂಟಪಗಳಿಗೆ ತೀವ್ರ ಹಾನಿಯಾಗಿದೆ. ಗಣೇಶ‌ ಮೂರ್ತಿ ಎದುರು ಹಮ್ಮಿಕೊಂಡಿರುವ ಧಾರ್ಮಿಕ ಕಾರ್ಯಗಳಿಗೂ ಮಳೆ ಅಡ್ಡಿಯಾಗಿದೆ.

ಮಂಗಳೂರು ನಗರದ ಕೊಡಿಯಾಲ್ ಬೈಲ್ ತಗ್ಗುಪ್ರದೇಶ, ಕೊಟ್ಟಾರ ಚೌಕಿ , ಪಂಪ್‌ವೆಲ್, ಜ್ಯೋತಿ ಸರ್ಕಲ್ ಮೊದಲಾದ ಪ್ರದೇಶಗಳಲ್ಲಿ ರಸ್ತೆ ಹೊಳೆಯಂತಾಗಿದೆ. ಮನೆಗಳಿಗೆ ನೀರು‌ ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.‌

ADVERTISEMENT

ಮಳೆಯ ಕಾರಣಕ್ಕೆ ಮಂಗಳೂರು, ಪುತ್ತೂರು, ಮೂಲ್ಕಿ, ಮೂಡುಬಿದಿರೆ, ಉಳ್ಳಾಲ, ಬಂಟ್ವಾಳ ತಾಲ್ಲೂಕುಗಳ ಶಾಲೆ - ಕಾಲೇಜುಗಳಿಗೆ ಗುರುವಾರ ರಜೆ ಘೋಷಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.