ADVERTISEMENT

ಕುಕ್ಕೆಶ್ರೀ: ಹಿರಿಯರಿಗೆ ಸಹಾಯ ಕೇಂದ್ರ

​ಪ್ರಜಾವಾಣಿ ವಾರ್ತೆ
Published 24 ಜೂನ್ 2023, 20:23 IST
Last Updated 24 ಜೂನ್ 2023, 20:23 IST
   

ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹಿರಿಯ ನಾಗರಿಕರಿಗೆ ಶೀಘ್ರ ದರ್ಶನಕ್ಕೆ ಅನುಕೂಲ ಆಗುವಂತೆ ಸಹಾಯ ಕೇಂದ್ರ ತೆರೆಯಲಾಗಿದೆ. ರಾಜ್ಯ ಧಾರ್ಮಿಕ ದತ್ತಿ ಇಲಾಖೆಯ ಸೂಚನೆಯಂತೆ ದೇವಸ್ಥಾನದ ರಾಜಗೋಪುರ ಬಳಿ ಕೇಂದ್ರ ಇದೆ.

65 ವರ್ಷಕ್ಕೂ ಮೇಲಿನವರಿಗೆ ಇದರ ಅನುಕೂಲ ಸಿಗಲಿದೆ. ಸಹಾಯ ಕೇಂದ್ರದ ಮೂಲಕ ಹಿರಿಯರು ವಿಶೇಷ ಸರತಿ ಸಾಲಿನ ವ್ಯವಸ್ಥೆಯಲ್ಲಿ ಮುಂದೆ ಸಾಗಬಹುದಾಗಿದೆ. ದೇವರ ದರ್ಶನ, ಸೇವೆ ಮತ್ತು ಪ್ರಸಾದ ಭೋಜನವನ್ನು ಅವರು ಬೇಗ ಸ್ವೀಕರಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT