ADVERTISEMENT

ಕ್ರೀಡಾಪಟುಗಳಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 10 ಜುಲೈ 2018, 10:55 IST
Last Updated 10 ಜುಲೈ 2018, 10:55 IST
ಕ್ರೀಡಾಪಟುಗಳಾದ ರತನ್, ಮಿಥಿನ್ ಕುಮಾರ್ ಮತ್ತು ವರುಣ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. (ಪ್ರಜಾವಾಣಿ ವಾರ್ತೆ)
ಕ್ರೀಡಾಪಟುಗಳಾದ ರತನ್, ಮಿಥಿನ್ ಕುಮಾರ್ ಮತ್ತು ವರುಣ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. (ಪ್ರಜಾವಾಣಿ ವಾರ್ತೆ)   

ಉಜಿರೆ: ಎಸ್.ಡಿ.ಎಂ. ಸ್ವಾಯತ್ತ ಕಾಲೇಜಿನ ಕಬಡ್ಡಿ ಕ್ರೀಡಾಪಟುಗಳಾದ ರತನ್, ಮಿಥಿನ್ ಕುಮಾರ್ ಮತ್ತು ವರುಣ್ ಶೆಟ್ಟಿ ಅವರನ್ನು ಕಾಲೇಜಿನಲ್ಲಿ ಬೆಂಗಳೂರಿನ ರಾಜ್ಯ ಅಮೆಚೂರ್ ಕಬಡ್ಡಿ ಸಂಸ್ಥೆ ಮತ್ತು ರಾಜ್ಯ ಕಬಡ್ಡಿ ತೀರ್ಪುಗಾರರ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು.

ಭಾರತೀಯ ಕ್ರೀಡಾ ಪ್ರಾಧಿಕಾರದ ಕಬಡ್ಡಿ ತರಬೇತುದಾರ ಡಾ. ಶ್ರೀಧರ್ ಕ್ರೀಡಾಪಟುಗಳನ್ನು ಸನ್ಮಾನಿಸಿದರು. ರತನ್ ಮತ್ತು ವರುಣ್ ಶೆಟ್ಟಿ ವಿಜಯಾ ಬ್ಯಾಂಕ್‌ನಲ್ಲಿ ನೌಕರಿಗೆ ಆಯ್ಕೆಯಾಗಿದ್ದಾರೆ. ಮಿಥಿನ್ ಕುಮಾರ್ ಪ್ರೊ–ಕಬಡ್ಡಿ ಆಟಗಾರರಾಗಿ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT