ADVERTISEMENT

ಪರಿವರ್ತನೆಯ ಕಾಲಘಟ್ಟದಲ್ಲಿ ಜಗತ್ತು: ನಳಿನ್ ಕುಮಾರ್ ಕಟೀಲ್

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2024, 14:07 IST
Last Updated 22 ಫೆಬ್ರುವರಿ 2024, 14:07 IST
ಜಗದೀಶ್ ಆಳ್ವ ಕುವೆತ್ತಬೈಲ್ ಅವರಿಗೆ ಬಿಜೆಪಿ ದ್ವಜ ಹಸ್ತಾಂತರಿಸಲಾಯಿತು
ಜಗದೀಶ್ ಆಳ್ವ ಕುವೆತ್ತಬೈಲ್ ಅವರಿಗೆ ಬಿಜೆಪಿ ದ್ವಜ ಹಸ್ತಾಂತರಿಸಲಾಯಿತು   

ಮುಡಿಪು: ಮೋದಿ ಅವರು ಪ್ರಧಾನಿಯಾದ ಬಳಿಕ ಭಾರತದ ಶಕ್ತಿ ಜಗತ್ತಿಗೆ ಪರಿಚಯವಾಗಿದೆ. ಜಗತ್ತು ಪರಿವರ್ತನೆಯ ಕಾಲಘಟ್ಟದಲ್ಲಿದೆ. ಇಡೀ ಜಗತ್ತು ಭಾರತದತ್ತ ನೋಡುತ್ತಿದೆ. ಮೋದಿ ನೇತೃತ್ವದ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರೋಣ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

ಮುಡಿಪುವಿನ ಮುಡಿಪಿನ್ನಾರು ದೇವಸ್ಥಾನದ ವಠಾರದಲ್ಲಿ ನಡೆದ ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಮಂಗಳೂರು ಮಂಡಲದ ಅಧ್ಯಕ್ಷರ ಮತ್ತು ಪದಾಧಿಕಾರಿಗಳ ಪದಗ್ರಹಣ, ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಘಟಕದ ಕಾರ್ಯದರ್ಶಿ ಬ್ರಜೇಶ್ ಚೌಟ ಮಾತನಾಡಿ, 2024ರ ಚು‌ನಾವಣೆ ದೇಶವನ್ನು ಪ್ರೀತಿಸುವವರ ಮತ್ತು ದೇಶವನ್ನು ಒಡೆಯುವವರ ನಡುವಿನ ಚುನಾವಣೆಯಾಗಿದೆ. ಮೋದಿ ಅವರು ಜಾರೊಗೊಳಿಸಿರುವ ಯೋಜನೆಗಳನ್ನು ಜನರಿಗೆ ತಲುಪಿಸಿ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರೋಣ ಎಂದರು.

ADVERTISEMENT

ಚಂದ್ರಹಾಸ್ ಪಂಡಿತ್ ಹೌಸ್ ಅಧ್ಯಕ್ಷತೆಯನ್ನು ವಹಿಸಿದ್ದರು.

ಮಂಗಳೂರು ಮಂಡಲದ ನೂತನ ಅಧ್ಯಕ್ಷ ಜಗದೀಶ್ ಆಳ್ವ ಕುವೆತ್ತಬೈಲ್, ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಮಾತನಾಡಿದರು.

ಪಮುಖರಾದ ನಿತಿನ್, ರವೀಂದ್ರ ಶೆಟ್ಟಿ ಉಳಿದೊಟ್ಟು, ಪ್ರೇಮಾನಂದ ಶೆಟ್ಟಿ, ಸಂತೋಷ್ ಕುಮಾರ್ ರೈ ಬೋಳಿಯಾರ್, ದಿನೇಶ್ ಅಮ್ಟೂರು, ಸಂದ್ಯಾ ಪೈ, ವಿದ್ಯಾಗೌರಿ, ಮಹೇಶ್ ಜೋಗಿ, ಮೋಹನ್ ರಾಜ್ ಕೆ.ಆರ್‌. ವಸಂತ ಜೆ.ಪೂಜಾರಿ, ಟಿ. ಜಿ. ರಾಜಾರಾಂ ಭಟ್, ಚಂದ್ರಹಾಸ ಉಚ್ಚಿಲ್‌, ಚಂದ್ರಹಾಸ್ ಉಳ್ಳಾಲ್, ಸೀತಾರಾಂ ಬಂಗೇರ, ಸೇಸಪ್ಪ ಟೈಲರ್ ಭಾಗವಹಿಸಿದ್ದರು.

ಉಪಾಧ್ಯಕ್ಷ ಹೇಮಂತ್ ಶೆಟ್ಟಿ ಸ್ವಾಗತಿಸಿದರು. ದಯಾನಂದ ತೊಕ್ಕೊಟ್ಟು ವಂದಿಸಿದರು. ಜೀವನ್ ತೊಕ್ಕೊಟ್ಟು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.