ADVERTISEMENT

‘ಭಾಷೆ ಮೂಲಕ ನಾಡು ಉಳಿಸಿ’

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2021, 16:38 IST
Last Updated 1 ನವೆಂಬರ್ 2021, 16:38 IST
ಕಡಬ ತಾಲ್ಲೂಕು ರಾಷ್ಟ್ರೀಯ ಹಬ್ಬ ಆಚರಣಾ ಸಮಿತಿ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ಎಪಿಎಂಸಿ. ಅಧ್ಯಕ್ಷ ದಿನೇಶ್ ಮೆದು ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಟಿ.ಎಂ. ಮ್ಯಾಥ್ಯೂ, ಅನಂತ ಶಂಕರ ಇದ್ದರು.
ಕಡಬ ತಾಲ್ಲೂಕು ರಾಷ್ಟ್ರೀಯ ಹಬ್ಬ ಆಚರಣಾ ಸಮಿತಿ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ಎಪಿಎಂಸಿ. ಅಧ್ಯಕ್ಷ ದಿನೇಶ್ ಮೆದು ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಟಿ.ಎಂ. ಮ್ಯಾಥ್ಯೂ, ಅನಂತ ಶಂಕರ ಇದ್ದರು.   

ಕಡಬ(ಉಪ್ಪಿನಂಗಡಿ): ‘ಅನ್ಯ ಭಾಷೆಯನ್ನು ಗೌರವಿಸುತ್ತಾ ಮಾತೃಭಾಷೆಯನ್ನು ಉಳಿಸಿಕೊಳ್ಳಬೇಕು’ ಎಂದು ಗಾಂಧಿ ವಿಚಾರ ವೇದಿಕೆ ಕಡಬ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಎಂ. ಮ್ಯಾಥ್ಯೂ ಹೇಳಿದರು.

ಕಡಬ ತಾಲ್ಲೂಕು ರಾಷ್ಟ್ರೀಯ ಹಬ್ಬ ಆಚರಣಾ ಸಮಿತಿ ವತಿಯಿಂದ ನಡೆದ ಕರ್ನಾಟಕ ರಾಜ್ಯೋತ್ಸವದಲ್ಲಿ ಅವರು ಮಾತನಾಡಿದರು. ಪುತ್ತೂರು ಎಪಿಎಂಸಿ. ಅಧ್ಯಕ್ಷ ದಿನೇಶ್ ಮೆದು ಅಧ್ಯಕ್ಷತೆ ವಹಿಸಿದ್ದರು.

ಎಪಿಎಂಸಿ. ನಿರ್ದೇಶಕಿ ಪುಲಸ್ತ್ಯಾ ರೈ, ಕಡಬ ತಹಶೀಲ್ದಾರ್‌ ಅನಂತ ಶಂಕರ, ಕನ್ನಡ ಸಾಹಿತ್ಯ ಪರಿಷತ್ ಕಡಬ ತಾಲ್ಲೂಕು ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಪಿ.ಪಿ. ವರ್ಗೀಸ್‌, ಜೆಡಿಎಸ್ ಮುಖಂಡ ಸೆಯ್ಯದ್ ಮೀರಾ ಸಾಹೇಬ್, ಕಡಬ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮತ್ತಡಿ, ಕಡಬ ಠಾಣಾಧಿಕಾರಿ
ರುಕ್ಮ ನಾಯ್ಕ, ರಾಮಕುಂಜೇಶ್ವರ ಪದವಿ ಕಾಲೇಜು ಪ್ರಾಚಾರ್ಯ ಗಣರಾಜ ಕುಂಬ್ಲೆ ಮಾತನಾಡಿದರು.
ಕುಮಾರ್ ಸ್ವಾಗತಿಸಿದರು. ಆನಂದ ಆಪ್ಟೆ ವಂದಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.