ADVERTISEMENT

ಗಡಿ: ಸಂಚಾರಕ್ಕೆ ಕಾಸರಗೋಡು ಜಿಲ್ಲಾಡಳಿತ ಅನುಮತಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 4:15 IST
Last Updated 10 ಆಗಸ್ಟ್ 2020, 4:15 IST
ಕರ್ನಾಟಕ ಮತ್ತು ಕೇರಳ ಗಡಿ
ಕರ್ನಾಟಕ ಮತ್ತು ಕೇರಳ ಗಡಿ    

ಮಂಗಳೂರು: ಕಾಸರಗೋಡಿನಿಂದ ದಕ್ಷಿಣ ಕನ್ನಡ ಜಿಲ್ಲೆಗೆ ನಿತ್ಯ ತೆರಳುವ ವರಿಗೆ ಪ್ರಯಾಣಕ್ಕೆ ಅನುಮತಿ ನೀಡಿ ಕಾಸರಗೋಡು ಜಿಲ್ಲಾಧಿಕಾರಿ ಡಾ. ಸಜಿತ್ ಬಾಬು ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ.

ಕಾಯಂ ಆಗಿ ತೆರಳುವವರಿಗೆ ಅನುಕೂಲವಾಗುವಂತೆ ತಲಪಾಡಿಯಲ್ಲಿ ನೋಂದಣಿಗೆ ವ್ಯವಸ್ಥೆ ಮಾಡಲಾಗಿದೆ. ದಕ್ಷಿಣ ಕನ್ನಡಕ್ಕೆ ನಿತ್ಯ ತೆರಳುವವರಿಗೆ ಹಾಗೂ ದಕ್ಷಿಣ ಕನ್ನಡದಿಂದ ಕಾಸರಗೋಡಿಗೆ ಮರಳುವವರಿಗೆ ತಲಪಾಡಿಯಲ್ಲಿ ನೋಂದಣಿ ಡಾಟಾ ಎಂಟ್ರಿ ಟೀಂ ನಡೆಸಲಿದೆ.

ಕೋವಿಡ್ 19 ಜಾಗ್ರತಾ ಪೋರ್ಟಲ್‌ನಲ್ಲಿ ಡೈಲಿ ಪಾಸ್ ವಿಭಾಗದಲ್ಲಿ ನೋಂದಣಿ ಮಾಡಬೇಕು. ತಲಪಾಡಿ ಗಡಿಯಲ್ಲಿ ಜಿಲ್ಲಾ ವೈದ್ಯಾಧಿಕಾರಿ ನೇತೃತ್ವದಲ್ಲಿ ನಡೆಯುವ ಆ್ಯಂಟಿಜನ್ ತಪಾಸಣೆಯ ನೆಗೆಟಿವ್ ಪ್ರಮಾಣ ಪತ್ರ ನೀಡಲಾಗುತ್ತಿದ್ದು, ಈ ಪ್ರಮಾಣಪತ್ರದ ಜತೆಗೆ ಉದ್ಯೋಗಕ್ಕೆ ತೆರಳುವವರು ಸಂಸ್ಥೆಯ ಮಾಲೀಕನ ಹೆಸರು, ಕಚೇರಿ ವಿಳಾಸ ಹಾಗೂ ಸಂಸ್ಥೆಯ ಗುರುತು ಚೀಟಿಯನ್ನು ಕಡ್ಡಾಯವಾಗಿ ತೋರಿಸಬೇಕು. ಅರೋಗ್ಯ ಇಲಾಖೆ ಕೆಲವೇ ನಿಮಿಷದಲ್ಲಿ ಪಾಸ್ ನೀಡಲಿದೆ ಎಂದು ತಿಳಿಸಿದ್ದಾರೆ.

ADVERTISEMENT

ಪ್ರತಿ ಏಳು ದಿನಗಳಿಗೊಮ್ಮೆ ಪ್ರಯಾಣಿ ಕರು ಈ ಮಾರ್ಗಸೂಚಿ ಪಾಲಿಸಬೇಕಿದೆ. ಇನ್ನೊಂದು ಆದೇಶದವರಿಗೆ ಇದು ಮುಂದುವರಿಯಲಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.