ಮಂಗಳೂರು:ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಶ್ರಮಿಕ ರೈಲಿನ ಎಂಜಿನ್ ಹಳಿ ತಪ್ಪಿದ್ದು, ಯಾವುದೇ ಹಾನಿ ಆಗಿಲ್ಲ. ಇಲ್ಲಿನ ಪಡೀಲ್ ಬಳಿ ಮಧ್ಯರಾತ್ರಿ ಈ ಘಟನೆ ನಡೆದಿದೆ.
ಕೇರಳದ ತ್ರಿಶೂರ್ನಿಂದ ಜೈಪುರ್ಗೆ ತೆರಳುವ ಶ್ರಮಿಕ್ ಸ್ಪೆಷಲ್ ಎಕ್ಸ್ಪ್ರೆಸ್ ಮಂಗಳೂರಿನ ಪಡೀಲ್ ರೈಲ್ವೆ ಹಳಿಯಲ್ಲಿ ರಾತ್ರಿ ಸುಮಾರು2 ಗಂಟೆಗೆ ಹಳಿ ತಪ್ಪಿದ್ದು, ಮುಂಜಾನೆ4ರ ವೇಳೆಗೆ ಕಾರ್ಮಿಕರ ಪ್ರಯಾಣಕ್ಕೆ ಬದಲಿ ಎಂಜಿನ್ ವ್ಯವಸ್ಥೆ ಮಾಡಲಾಗಿದೆ.
ಸದ್ಯಕ್ಕೆ ಹಳಿ ತಪ್ಪಿರುವ ರೈಲ್ವೆ ಎಂಜಿನ್ ತೆರವು ಕಾರ್ಯ ಪ್ರಗತಿಯಲ್ಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.