ADVERTISEMENT

ಸಂಪೂರ್ಣ ಜಾರಿಯಾಗದ ಸಂವಿಧಾನ: ಎಂ.ಗೋಪಿನಾಥ್

ಜೈಭೀಮ್ ಜನಜಾಗೃತಿ ಜಾಥಾದಲ್ಲಿ ಎಂ.ಗೋಪಿನಾಥ್ ಬೇಸರ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2022, 6:38 IST
Last Updated 4 ನವೆಂಬರ್ 2022, 6:38 IST
ಬಹುಜನ ಸಮಾಜ ಪಕ್ಷದ ರಾಜ್ಯವ್ಯಾಪಿ 'ಜೈಭೀಮ್ ಜನಜಾಗೃತಿ ಜಾಥಾ'ಗೆ ಬೆಳ್ತಂಗಡಿಯಲ್ಲಿ ಸ್ವಾಗತ ಕೋರಲಾಯಿತು
ಬಹುಜನ ಸಮಾಜ ಪಕ್ಷದ ರಾಜ್ಯವ್ಯಾಪಿ 'ಜೈಭೀಮ್ ಜನಜಾಗೃತಿ ಜಾಥಾ'ಗೆ ಬೆಳ್ತಂಗಡಿಯಲ್ಲಿ ಸ್ವಾಗತ ಕೋರಲಾಯಿತು   

ಬೆಳ್ತಂಗಡಿ: ‘ಸಂವಿಧಾನವು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜನರಿಗೆ ಬದುಕಲು ಕೊಟ್ಟು ಹೋದ ಹಕ್ಕುಪತ್ರ. ಆದರೆ, ಅದು ಪೂರ್ಣ ಪ್ರಮಾಣದಲ್ಲಿ ಜಾರಿಯಾಗದೆ ಶೇ 15ರಷ್ಟು ಮಂದಿಯ ಹಿತರಕ್ಷಣೆಗೆ ಬೇಕಾಗಿರುವಷ್ಟು ಮಾತ್ರ ಜಾರಿಯಾಗಿದೆ’ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಕರ್ನಾಟಕ ರಾಜ್ಯ ಸಂಯೋಜಕ ಎಂ. ಗೋಪಿನಾಥ್ ಹೇಳಿದರು.

ಪಕ್ಷ ಆಯೋಜಿಸಿರುವ ರಾಜ್ಯ ವ್ಯಾಪಿ ‘ಜೈಭೀಮ್ ಜನಜಾಗೃತಿ ಜಾಥಾ’ ಬೆಳ್ತಂಗಡಿಗೆ ಬಂದ ಸಂದರ್ಭದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.

ಚಿಕ್ಕಮಗಳೂರು ಜಿಲ್ಲೆಯಿಂದ ಬಂದ ಜಾಥಾವನ್ನು ಉಜಿರೆಯಲ್ಲಿ ಸ್ವಾಗತಿಸಿ, ಬೆಳ್ತಂಗಡಿ ಬಸ್ ನಿಲ್ದಾಣದ ಬಳಿಗೆ ಕರೆತರಲಾಯಿತು. ಪಂಚ ರಾಜ್ಯಗಳ ಉಸ್ತುವಾರಿ ನಿತಿನ್ ಸಿಂಗ್, ರಾಜ್ಯ ಕಾರ್ಯದರ್ಶಿ ಕಾಂತಪ್ಪ ಆಲಂಗಾರ್, ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ದಾಸಪ್ಪ ಎಡಪದವುಮಾತ ನಾಡಿದರು. ಮಂಜುಬಕ್ಕಿ ನೇತೃತ್ವದ ಕಲಾ ತಂಡದವರು ಬಹುಜನ ಗೀತೆ ಹಾಡಿದರು.

ADVERTISEMENT

ಬಿಎಸ್‌ಪಿ ರಾಜ್ಯ ಉಸ್ತುವಾರಿ ದಿನೇಶ್ ಗೌತಮ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಆರ್.ಮುನಿಯಪ್ಪ, ಜಾಕಿರ್ ಹುಸೇನ್, ವೇಲಾಯುಧನ್ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಪ್ಪ ಗರ್ಡಾಡಿ, ಸಂಯೋಜಕ ನಾರಾಯಣ್ ಭೋದ್, ಖಜಾಂಚಿ ವಿಮಲಾ ಕೆ, ಕಚೇರಿ ಕಾರ್ಯದರ್ಶಿ ಶಿವರಾಮ್, ಮುಖಂಡ ರಾದ ಲೋಕೇಶ್ ಮುತ್ತೂರು, ನಿಶಾಂತ್, ಉಮೇಶ್ ಪಾಡ್ಯಾರು, ಸಂಜೀವ ನೀರಾಡಿ, ಸಂಜೀವ, ವಿಠಲ್ ಮುಂತಾದವರು ಇದ್ದರು.

ಗೋಪಾಲ್ ಮುತ್ತೂರು ನಿರೂಪಿಸಿದರು. ಪಿ.ಎಸ್. ಶ್ರೀನಿವಾಸ್ ವಂದಿಸಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.