ADVERTISEMENT

ಮಂಗಳೂರು: ಯುವಕನ ಮೇಲೆ ತಲವಾರು ದಾಳಿ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 4:02 IST
Last Updated 24 ನವೆಂಬರ್ 2020, 4:02 IST

ಮಂಗಳೂರು: ನಗರದ ಯುನಿಟಿ ಆಸ್ಪತ್ರೆ ಸಮೀಪ ಸೋಮವಾರ ರಾತ್ರಿ ಯುವಕನೊಬ್ಬನ ಮೇಲೆ ತಲವಾರು ದಾಳಿ ನಡೆದಿದೆ.

ನೌಶಾದ್ (30) ಗಾಯಗೊಂಡ ಯುವಕ.

ಇತ್ತೀಚೆಗೆ ಕಂದಾವರ ಮಸೀದಿ ಸಮೀಪ ಚೂರಿ ಇರಿತಕ್ಕೊಳಗಾಗಿದ್ದ ಅಬ್ದುಲ್ ಅಝೀಝ್ ಅವರ ಅಳಿಯ ನೌಶಾದ್ ಅವರ ಮೇಲೆ ತಲವಾರಿನಿಂದದಾಳಿ ಮಾಡಲಾಗಿದೆ. ಅವರ ಎದೆ ಭಾಗಕ್ಕೆ ಗಾಯವಾಗಿದ್ದು, ಕಾರಿನಲ್ಲಿ ಬಂದಿದ್ದ ತಂಡ ಈ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.