ADVERTISEMENT

ದಕ್ಷಿಣ ಕನ್ನಡ: ಮಹಿಳೆಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿದ ಕಾನ್‌ಸ್ಟೆಬಲ್‌ ಸೆರೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 4:45 IST
Last Updated 4 ಸೆಪ್ಟೆಂಬರ್ 2025, 4:45 IST
ಅನರ್ಹರ ಅಶ್ಲೀಲ ಸಂಭಾಷಣೆ ವೈರಲ್‌
ಅನರ್ಹರ ಅಶ್ಲೀಲ ಸಂಭಾಷಣೆ ವೈರಲ್‌   

ಮೂಡುಬಿದಿರೆ (ದಕ್ಷಿಣ ಕನ್ನಡ): ದೂರುದಾರ ಮಹಿಳೆಗೆ ಪದೇ ಪದೇ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿದ್ದ ಮೂಡುಬಿದಿರೆ ಠಾಣೆ ಕಾನ್‌ಸ್ಟೆಬಲ್‌ ಒಬ್ಬರನ್ನು ಅದೇ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶಾಂತಪ್ಪ (28) ಬಂಧಿತ ಕಾನ್‌ಸ್ಟೆಬಲ್. ಕೋರ್ಟ್‌ ಆತನಿಗೆ ಜಾಮೀನು ನೀಡಿದೆ. ಬಂಧನದ ಹಿಂದೆಯೇ ಅವರನ್ನು ಪೊಲೀಸ್ ಕಮಿಷನರ್ ಅಮಾನತುಗೊಳಿಸಿದ್ದಾರೆ.

ಕೌಟುಂಬಿಕ ದೌರ್ಜನ್ಯ ಕುರಿತು ಪತಿ ವಿರುದ್ಧ ದೂರು ನೀಡಲು ಆ.25ರಂದು ಮಹಿಳೆ ಠಾಣೆಗೆ ಬಂದಿದ್ದರು. ಆಗ ಕರ್ತವ್ಯದಲ್ಲಿದ್ದ ಶಾಂತಪ್ಪ, ಮಹಿಳೆಯ ಮೊಬೈಲ್ ಸಂಖ್ಯೆಯನ್ನು ಬರೆದಿಟ್ಟಿದ್ದರು. ಇನ್‌ಸ್ಪೆಕ್ಟರ್ ಅವರು ಠಾಣೆಗೆ ದಂಪತಿಯನ್ನು ಕರೆಸಿ ವಿಚಾರಣೆ ನಡೆಸಿ ಕಳುಹಿಸಿದ್ದರು.

ADVERTISEMENT

ಆ ನಂತರ ಶಾಂತಪ್ಪ ಮೂರು ಸಲ ಮಹಿಳೆಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡಿದ್ದ ಎಂದು, ಕರೆ ದಾಖಲೆ ಪುರಾವೆ ಸಮೇತ ದೂರು ನೀಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. 

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಶಾಂತಪ್ಪ 2022ರಲ್ಲಿ ಪೊಲೀಸ್‌ ಕಾನ್‌ಸ್ಟೆಬಲ್‌ ಆಗಿ ಉದ್ಯೋಗಕ್ಕೆ ಸೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.