ಮಂಗಳೂರು: ಸೆಂಟರ್ ಫಾರ್ ಹೈ ಟೆಕ್ನಾಲಜಿ ಮುಂಬೈನಲ್ಲಿ ಗುರುವಾರ ಆಯೋಜಿಸಿದ್ದ ಇಂಧನ ತಂತ್ರಜ್ಞಾನ ಸಭೆಯಲ್ಲಿ ಮಂಗಳೂರು ರಿಫೈನರಿ ಮತ್ತು ಪೆಟ್ರೊಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್) ಎರಡು ಪ್ರಶಸ್ತಿಗಳನ್ನು ಪಡೆದಿದೆ.
ಅತ್ಯುತ್ತಮ ಫರ್ನೇಸ್ ನಿರ್ವಹಣೆಗಾಗಿ 2019–20ನೇ ಸಾಲಿನ ಸಕ್ಷಂ ಪ್ರಶಸ್ತಿ ಹಾಗೂ 2021–22ನೇ ಸಾಲಿನ ನಾವೀನ್ಯ ರಿಫೈನರಿ ಪ್ರಶಸ್ತಿ, ಎಂಆರ್ಪಿಎಲ್ಗೆ ದೊರೆತಿದೆ. ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ರಾಮೇಶ್ವರ್ ತೇಲಿ ಅವರು ಎಂಆರ್ಪಿಎಲ್ ವ್ಯವಸ್ಥಾಪಕ ನಿರ್ದೇಶಕ ಎಂ. ವೆಂಕಟೇಶ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಎಂಆರ್ಪಿಎಲ್ ಜಿಜಿಎಂ ನಂದಕುಮಾರ್ ವಿ, ಸಿಜಿಎಂ ಸುಧೀರ್ ಪೈ ಇದ್ದರು. ವಿವಿಧೆಡೆ ಪೆಟ್ರೊಕೆಮಿಕಲ್ಸ್ ಸಂಸ್ಥೆಗಳ ಸಾವಿರಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.