ADVERTISEMENT

ಉಡ್ಡಯನಕ್ಕೆ ಕೆಡೆಟ್‌ಗಳ ಲಗ್ಗೆ; ಮಂಗಳೂರಿನ ಬಾನಂಗಳಕ್ಕೆ ಎನ್‌ಸಿಸಿ ಏರ್‌ವಿಂಗ್

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 16:27 IST
Last Updated 24 ಜನವರಿ 2020, 16:27 IST
ಎನ್‌ಸಿಸಿ ಕೆಡೆಟ್‌ಗಳು ಹೆಲಿಕಾಪ್ಟರ್‌ ಮೂಲಕ ಉಡ್ಡಯನದ ಅನುಭವ ಪಡೆದರು.
ಎನ್‌ಸಿಸಿ ಕೆಡೆಟ್‌ಗಳು ಹೆಲಿಕಾಪ್ಟರ್‌ ಮೂಲಕ ಉಡ್ಡಯನದ ಅನುಭವ ಪಡೆದರು.   

ಮಂಗಳೂರು: ಎರಡು ದಶಕಗಳಿಂದ ಕರಾವಳಿಯಲ್ಲಿ ಎನ್‌ಸಿಸಿ ಏರ್‌ವಿಂಗ್ ಪ್ರೌಢಶಾಲಾ ತರಬೇತು ತಂಡಗಳು ಕಾರ್ಯನಿರ್ವಹಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಬಾನಂಗಳಕ್ಕೆ ನೆಗೆದು ಗಮನ ಸೆಳೆಯುತ್ತಿವೆ.

ಮೂಡುಬಿದಿರೆ ಆಳ್ವಾಸ್‌ ಎಂಜಿನಿಯರಿಂಗ್ ಕಾಲೇಜು ಮೈದಾನಾದಲ್ಲಿ ನಡೆಯುತ್ತಿರುವ ವಾರ್ಷಿಕ ಎನ್‌ಸಿಸಿ ತರಬೇತಿ ಶಿಬಿರದಲ್ಲಿ ನಗರದ ಸೆಂಟ್‌ ಅಲೋಶಿಯಸ್ ಪ್ರೌಢಶಾಲೆ ವಿದ್ಯಾರ್ಥಿಗಳಾದ ಸ್ಟೀವ್, ಜೋಶಲ್, ಜಿಯಾ, ಜನನಿ ಹಾಗೂ ಶೈನಾ ಅವರು ಸಂಸ್ಥೆಯ ಎನ್‌ಸಿಸಿ ಅಧಿಕಾರಿ ಸುನಿಲ್ ಲೋಬೋರವರ ಮಾರ್ಗದರ್ಶನದಲ್ಲಿ ಉಡ್ಡಯನದ ಅನುಭವಗಳನ್ನು ಪಡೆದಿದ್ದಾರೆ.

ಈ ಬಾರಿ ಉಡ್ಡಯನ ತರಬೇತಿಯೊಂದಿಗೆ, ಯುವ ಪ್ರತಿಭೆಗಳನ್ನು ಜಗತ್ತಿಗೆ ಪರಿಚಯಿಸುವ ಕಾರ್ಯವನ್ನು ಕರಾವಳಿಯ ಈ ಶಿಬಿರದಲ್ಲಿ ಮಾಡಲಾಗುತ್ತಿದೆ. ಅತ್ಯಂತ ಕಿರಿಯ ಮಯಸ್ಸಿನಲ್ಲಿ ತಮಗೆ ದೊರೆತ ಅವಕಾಶ ಹಾಗೂ ಪ್ರೋತ್ಸಾಹಕ್ಕೆ ವಾಯುದಳದ ತರಬೇತುದಾರ ಗ್ರೂಪ್ ಕಮಾಂಡರ್ ಕರ್ನಲ್ ಎ.ಕೆ. ಶರ್ಮಾ ಹಾಗೂ ತಂಡಕ್ಕೆ ನೀಡಿದ ಉಡ್ಡಯನ ತರಬೇತಿ ಅವಿಸ್ಮರಣೀಯ ಎಂದು ವಿದ್ಯಾರ್ಥಿಗಳು ಸಂತಸ ಹಂಚಿಕೊಂಡಿದ್ದಾರೆ.

ADVERTISEMENT

ಎಳೆಯ ವಯಸ್ಸಿನಲ್ಲಿಯೇ ಎನ್‌ಸಿಸಿ ಏರ್‌ವಿಂಗ್ ಯುವ ಪ್ರತಿಭೆಗಳಿಗೆ ನೀಡುತ್ತಿರುವ ಅಪೂರ್ವ ಅವಕಾಶವಾಗಿದೆ. ಸಶಕ್ತ ಪ್ರತಿಭೆಗಳನ್ನು ಗುರುತಿಸಿ, ಭವಿಷ್ಯದ ವಿಭಾಗಗಳಿಗೆ ಆರಿಸಲು ಇದೊಂದು ಸದವಕಾಶವಾಗಿದೆ ಎಂದು ತರಬೇತುದಾರರು ಹಾಗೂ ಪಾಲಕರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.